ಕಾಂಚಿಪುರಂ ದೇವಸ್ಥಾನ: ಕ್ಯೂನಲ್ಲಿ ಉಸಿರುಗಟ್ಟಿ ಮೂವರು ಭಕ್ತರ ಸಾವು!

Published : Jul 18, 2019, 10:13 PM IST
ಕಾಂಚಿಪುರಂ ದೇವಸ್ಥಾನ: ಕ್ಯೂನಲ್ಲಿ ಉಸಿರುಗಟ್ಟಿ ಮೂವರು ಭಕ್ತರ ಸಾವು!

ಸಾರಾಂಶ

ಸರತಿ ಸಾಲಿನಲ್ಲಿ ನಿಂತಿದ್ದ ಮೂವರು ಭಕ್ತರ ಸಾವು| ಕಾಂಚಿಪುರಂ ದೇವಸ್ಥಾನದಲ್ಲಿ ಸಂಭವಿಸಿದ ದುರ್ಘಟನೆ| ದೀರ್ಘಕಾಲ ಕ್ಯೂನಲ್ಲಿ ನಿಂತ ಪರಿಣಾಮ ಉಸಿರುಗಟ್ಟಿ ಸಾವು| ಇಬ್ಬರು ಮಹಿಳೆಯರು, ಓರ್ವ ಪುರುಷ ಭಕ್ತರ ಸಾವು| ಕಾಂಚಿಪುರಂನ ವರದರಾಜ ಪೇರುಮಾಳ್ ದೇವಸ್ಥಾನ| 

ಚೆನ್ನೈ(ಜು.18): ಕಾಂಚಿಪುರಂನ ವರದರಾಜ ಪೇರುಮಾಳ್ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮೂವರು ಭಕ್ತರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ದೀರ್ಘಕಾಲ ಕ್ಯೂನಲ್ಲಿ ನಿಂತ ಪರಿಣಾಮ ಇಬ್ಬರು ಮಹಿಳೆ ಸೇರಿದಂತೆ ಮೂವರು ಭಕ್ತರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಅಸ್ವಸ್ಥರಾದ ಕೂಡಲೇ ಅವರನ್ನು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ. 

ಮೃತರನ್ನು ಸೇಲಂ ಮೂಲದ ಆನಂದನ್(56), ಆವಡಿ ಮೂಲದ ಜಯಂತಿ(62) ಹಾಗೂ ಆಂಧ್ರ ಪ್ರದೇಶದ ಗುಂಟೂರ್ ಮೂಲದ ನಾರಾಯಣಿ(65) ಎಂದು ಗುರುತಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: DCM ಡಿಕೆ ಶಿವಕುಮಾರ್
ಪಿಎಂ ಫಸಲ್ ಬಿಮಾ ಯೋಜನೆ ದೊಡ್ಡ ಗೋಲ್‌ಮಾಲ್‌: ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ