ಉಡುಪಿ: ನಾಡಬಾಂಬ್ ಸಾಗಿಸುತ್ತಿದ್ದ ಮೂವರ ಬಂಧನ

Published : Nov 23, 2017, 02:34 PM ISTUpdated : Apr 11, 2018, 01:02 PM IST
ಉಡುಪಿ: ನಾಡಬಾಂಬ್ ಸಾಗಿಸುತ್ತಿದ್ದ ಮೂವರ ಬಂಧನ

ಸಾರಾಂಶ

ಅಕ್ರಮವಾಗಿ ಮೂವತ್ತಕ್ಕೂ ಹೆಚ್ಚು ನಾಡ ಬಾಂಬ್‌ಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೆಬ್ರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಾರ್ಕಳ: ಅಕ್ರಮವಾಗಿ ಮೂವತ್ತಕ್ಕೂ ಹೆಚ್ಚು ನಾಡ ಬಾಂಬ್‌ಗಳನ್ನು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೆಬ್ರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕನ್ಯಾನ ನಿವಾಸಿ ನಾಗೇಶ ನಾಯ್ಕ(37), ಅಲ್ಬಾಡಿಯ ಗುಣಕರ ಶೆಟ್ಟಿ (56) ಹಾಗೂ ಲಕ್ಷ್ಮಣ ಶೆಟ್ಟಿ (67) ಬಂಧಿತರು. ಆರೋಪಿಗಳಲ್ಲೊಬ್ಬನಾದ ನಾಗೇಶ್ ನಾಯಕ್ ಮಂಗಳವಾರ ಸಂಜೆ ಶಿವಪುರದ ಬ್ಯಾಣ ಮುಖ್ಯ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ನಾಡ ಬಾಂಬ್ ಗಳನ್ನು ಸಾಗಿಸುತ್ತಿದ್ದ. ಈ ವೇಳೆ ಗಸ್ತು ಕರ್ತವ್ಯದಲ್ಲಿ ಹೆಬ್ರಿ ಪೊಲೀಸರು ತಪಾಸಣೆ ನಡೆಸಿ ಆತನನ್ನು ಬಂಧಿಸಿ 30 ನಾಡ ಬಾಂಬ್, 1 ಚೂರಿ ಹಾಗೂ ತಲೆಗೆ ಕಟ್ಟುವ ಚಾರ್ಜ್ ಅನ್ನು ವಶಕ್ಕೆ ಪಡೆದಿದ್ದರು.

ಆತನನ್ನು ವಿಚಾರಣೆ ನಡೆಸಿದಾಗ ಈ ನಾಡ ಬಾಂಬ್‌ಗಳನ್ನು ಕಾಡುಪ್ರಾಣಿ ಗಳನ್ನು ಬೇಟೆಯಾಡಲು ಬಳಸುತ್ತಿದ್ದು, ಅಲ್ಬಾಡಿ ಗ್ರಾಮದ ಆರ್ಡಿ ಎಂಬಲ್ಲಿನ ಗುಣಕರ ಶೆಟ್ಟಿ ಎಂಬಾತನಿಂದ ತಲಾ ₹500ರಂತೆ ₹15 ಸಾವಿರ ಕೊಟ್ಟು ಖರೀದಿಸಿದ್ದಾಗಿ ಮಾಹಿತಿ ನೀಡಿದ್ದ. ಈ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸರು ಅಲ್ಬಾಡಿಯ ಗುಣಕರ ಶೆಟ್ಟಿ ಮನೆಯ ಮೇಲೆ ದಾಳಿ ನಡೆಸಿ ಇನ್ನೂ 3 ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ ಮಿಡ್ಲ್ ಕ್ಲಾಸ್ ಮದುವೆ ಖರ್ಚು ಭಾರಿ ಏರಿಕೆ? ಅದ್ಧೂರಿ ವಿವಾಹಕ್ಕೆ ಲೆಕ್ಕವೇ ಸಿಗುತ್ತಿಲ್ಲ
ಕಾಶಿ ವಿಶ್ವನಾಥ ಭಕ್ತರೇ ಗಮನಿಸಿ: ಇಂದಿನಿಂದ ಹೊಸ ನಿಯಮ ಜಾರಿ! ದರ್ಶನಕ್ಕೆ ತೆರಳುವ ಮುನ್ನ ಈ ಬದಲಾವಣೆಗಳನ್ನು ತಪ್ಪದೇ ತಿಳ್ಕೊಳ್ಳಿ!