ರೈತನಿಗೆ ಸಿಹಿ ಸುದ್ದಿ: ಈ ಬಾರಿ ಸಹಜ ಮುಂಗಾರು ಮಳೆ

Published : Apr 05, 2018, 11:11 AM ISTUpdated : Apr 14, 2018, 01:12 PM IST
ರೈತನಿಗೆ ಸಿಹಿ ಸುದ್ದಿ: ಈ ಬಾರಿ ಸಹಜ ಮುಂಗಾರು ಮಳೆ

ಸಾರಾಂಶ

ಮಳೆಯನ್ನೇ ನಂಬಿ ಬದುಕುವ ಭಾರತೀಯ ರೈತನಿಗೆ ಈ ವರ್ಷ ಒಂದು ಸಿಹಿ ಸುದ್ದಿಯಿದೆ. ದೇಶದಲ್ಲಿ ಈ ವರ್ಷ ‘ಸಹಜ’ ಮುಂಗಾರು ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಇಲಾಖೆ ಸ್ಕೈಮೆಟ್‌ ವೆದರ್‌ ಅಂದಾಜಿಸಿದೆ.

ನವದೆಹಲಿ: ಮಳೆಯನ್ನೇ ನಂಬಿ ಬದುಕುವ ಭಾರತೀಯ ರೈತನಿಗೆ ಈ ವರ್ಷ ಒಂದು ಸಿಹಿ ಸುದ್ದಿಯಿದೆ. ದೇಶದಲ್ಲಿ ಈ ವರ್ಷ ‘ಸಹಜ’ ಮುಂಗಾರು ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಇಲಾಖೆ ಸ್ಕೈಮೆಟ್‌ ವೆದರ್‌ ಅಂದಾಜಿಸಿದೆ. ಈ ಬಾರಿಯ ಮುಂಗಾರಿನ ದೀರ್ಘಾವಧಿ ಸರಾಸರಿ (ಎಲ್‌ಪಿಎ) 96-104ರಷ್ಟಿರಲಿದೆ ಎಂದು ಅದು ತಿಳಿಸಿದೆ.

ದೇಶದ ಮಳೆಯಲ್ಲಿ ಶೇ.70ರಷ್ಟುಪಾಲಿನ ಕೊಡುಗೆ ನೀಡುವ ನಾಲ್ಕು ತಿಂಗಳ ನೈರುತ್ಯ ಮುಂಗಾರು ಈ ಬಾರಿ ಜೂನ್‌ನಲ್ಲಿ ಆರಂಭವಾಗಿ, ಸೆಪ್ಟಂಬರ್‌ ವರೆಗೂ ಮುಂದುವರಿಯಲಿದೆ. ಆದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ಕೊಂಚ ಪ್ರಮಾಣ ಇಳಿಕೆಯಾಗಲಿದೆ. ಆಗಸ್ಟ್‌ನಲ್ಲಿ ಜುಲೈಗಿಂತಲೂ ಕಡಿಮೆ ಮಳೆಯಿರಲಿದೆ ಎಂದು ಸ್ಕೈಮೆಟ್‌ ಅಂದಾಜಿಸಿದೆ. ದೇಶದಲ್ಲಿ ಸಹಜ ಮಳೆಯಿರಲಿದೆಯಾದರೂ, ಈಶಾನ್ಯದ ಕೆಲವು ರಾಜ್ಯಗಳಲ್ಲಿ ಮಳೆ ಕೊರತೆಯಾಗಲಿದೆ ಎಂದೂ ಅದು ತಿಳಿಸಿದೆ.

ಸಹಜಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಶೇ.20ರಷ್ಟಿದ್ದರೆ, ಸಹಜಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯೂ ಶೇ.20ರಷ್ಟಿದೆ. ಆದರೆ ಸಂಪೂರ್ಣ ಬರಗಾಲ ಆಗುವ ಸಾಧ್ಯತೆಯಿಲ್ಲ. ದೀರ್ಘಾವಧಿ ಸರಾಸರಿ 90-96ರಷ್ಟಿದ್ದರೆ ಅದು ಸಹಜಕ್ಕಿಂತ ಕಡಿಮೆ ಮಳೆ ಎಂದು ಪರಿಗಣಿಸಲಾಗುತ್ತದೆ. ಎಲ್‌ಪಿಎ 90ಕ್ಕಿಂತಲೂ ಕಡಿಮೆಯಿದ್ದರೆ, ಅದನ್ನು ಕೊರತೆ ಮುಂಗಾರು ಎನ್ನುತ್ತಾರೆ. ಎಲ್‌ಪಿಎ 104ಕ್ಕಿಂತ ಹೆಚ್ಚಿದ್ದರೆ ಅದು ಸಹಜಕ್ಕಿಂತ ಅಧಿಕ ಮಳೆ ಎನ್ನಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!