
ನವದೆಹಲಿ: ಪಡಿತರ ಚೀಟಿಗಳ ಡಿಜಟಲೀಕರಣ ಮತ್ತು ಆಧಾರ್ ಸಂಖ್ಯೆ ಜೋಡಣೆ ಕ್ರಮದಿಂದಾಗಿ ಇದುವರೆಗೂ 2.75 ಕೋಟಿ ನಕಲಿ ಮತ್ತು ಬೋಗಸ್ ರೇಷನ್ ಕಾರ್ಡ್ಗಳನ್ನು ವ್ಯವಸ್ಥೆಯಿಂದ ತೊಡೆದು ಹಾಕಲು ಸರ್ಕಾರಕ್ಕೆ ನೆರವಾಗಿದೆ ಎಂದು ಕೇಂದ್ರ ಆಹಾರ ಇಲಾಖೆ ಹೇಳಿದೆ.
2013ರ ಜನವರಿಯಿಂದಲೇ ಪಡಿತರ ಚೀಟಿಗಳನ್ನು ಡಿಜಟಲೀಕರಣಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಇದು ಸಬ್ಸಿಡಿ ಸಹಿತ ಗೋಧಿ, ಅಕ್ಕಿ ಮತ್ತು ಇತರ ಆಹಾರ ದಾನ್ಯಗಳ ಸೋರಿಕೆಯನ್ನು ತಪ್ಪಿಸಲು ನೆರವಾಯಿತು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 17500 ರು. ಕೋಟಿ ಉಳಿತಾಯವಾಗಿದೆ. ಅಲ್ಲದೆ, ಸರಿಯಾದ ಫಲಾನುಭವಿಗಳಿಗೆ ಕೇಂದ್ರದ ಯೋಜನೆಗಳು ತಲುಪಿಸಲು ಇದು ನೆರವಾಗಿದೆ. ಆದರೆ, ಪಡಿತರ ಚೀಟಿಗೆ ಹೊಸ ಫಲಾನುಭವಿಗಳು ಸೇರ್ಪಡೆಯಾಗುತ್ತಿರುವ ಕಾರಣದಿಂದಾಗಿ ಸರ್ಕಾರಕ್ಕೆ ನೇರವಾಗಿ ಲಾಭವಾಗುತ್ತದೆ ಎನ್ನಲಾಗದು ಎಂದು ಆಹಾರ ಮತ್ತು ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಸರ್ಕಾರದ ದಾಖಲೆಗಳ ಪ್ರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದಲ್ಲಿ 23.19 ಕೋಟಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಇವುಗಳಲ್ಲಿ ಶೇ.82ರಷ್ಟುಪಡಿತರ ಚೀಟಿಗಳನ್ನು ಡಿಜಿಟಲೀಕರಣ ಮತ್ತು ಆಧಾರ್ ಜೋಡಣೆ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ಶೇ.100ರಷ್ಟುಆಧಾರ್ ಜೋಡಣೆಯಾದಾಗ ಮತ್ತಷ್ಟುಬೋಗಸ್ ಪಡಿತರ ಚೀಟಿಗಳು ನಿಷ್ಕಿ್ರಯಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.