ಫಸ್ಟ್ ಪಿಯುಸಿಯಲ್ಲಿ ಒಬ್ಬ, ಡಿಗ್ರಿಯಲ್ಲಿ ಮತ್ತೊಬ್ಬ; ಮದುವೆಗೆ ಅಡ್ಡಿಯಾಯ್ತು ಡಬಲ್ ಲವ್ ಕಹಾನಿ

Published : Nov 21, 2017, 09:51 AM ISTUpdated : Apr 11, 2018, 12:45 PM IST
ಫಸ್ಟ್ ಪಿಯುಸಿಯಲ್ಲಿ ಒಬ್ಬ, ಡಿಗ್ರಿಯಲ್ಲಿ ಮತ್ತೊಬ್ಬ; ಮದುವೆಗೆ ಅಡ್ಡಿಯಾಯ್ತು ಡಬಲ್ ಲವ್ ಕಹಾನಿ

ಸಾರಾಂಶ

ಇದು ಲವ್ ಮೇನಿಯಾ ಯುವತಿಯೊಬ್ಬಳು ಎರಡೆರಡು ಲವ್ ಮಾಡಿದರೂ  ಒಂದೂ ಸಕ್ಸಸ್ ಆಗುವ ಲಕ್ಷಣ ಕಾಣುತ್ತಿಲ್ಲ.  ಫಸ್ಟ್ ಪಿಯುಸಿಯಲ್ಲೊಂದು , ಫಸ್ಟ್ ಬಿಎಯಲ್ಲೊಂದು  ಒಬ್ಬ ಲವ್ವರ್ ಜೈಲು ಪಾಲಾಗಿದ್ದರೆ,  ಮತ್ತೊಬ್ಬ ಎಂಗೇಜ್'ಮೆಂಟ್ ನಂತರ  ಮದುವೆಗೆ ನಾ ಒಲ್ಲೆ ಹೇಳುತ್ತಿದ್ದಾನೆ.

ಶಿವಮೊಗ್ಗ (ನ.21): ಇದು ಲವ್ ಮೇನಿಯಾ ಯುವತಿಯೊಬ್ಬಳು ಎರಡೆರಡು ಲವ್ ಮಾಡಿದರೂ  ಒಂದೂ ಸಕ್ಸಸ್ ಆಗುವ ಲಕ್ಷಣ ಕಾಣುತ್ತಿಲ್ಲ.  ಫಸ್ಟ್ ಪಿಯುಸಿಯಲ್ಲೊಂದು , ಫಸ್ಟ್ ಬಿಎಯಲ್ಲೊಂದು  ಒಬ್ಬ ಲವ್ವರ್ ಜೈಲು ಪಾಲಾಗಿದ್ದರೆ,  ಮತ್ತೊಬ್ಬ ಎಂಗೇಜ್'ಮೆಂಟ್ ನಂತರ  ಮದುವೆಗೆ ನಾ ಒಲ್ಲೆ ಹೇಳುತ್ತಿದ್ದಾನೆ.

ಇದು ಜೀವನದಲ್ಲಿ ಎರಡೆರಡು ಲವ್ ಮಾಡಿ ಎಡವಟ್ಟು ಮಾಡಿಕೊಂಡವಳ ಕತೆ.  ಅಪ್ರಾಪ್ತ ವಯಸ್ಸಿನಲ್ಲಿ ಒಬ್ಬನ ಜೊತೆ ಲವ್ವಿ ಡವ್ವಿ. ವಯಸ್ಸಿಗೆ ಬಂದ ಮೇಲೆ ಮತ್ತೊಬ್ಬನ ಜೊತೆ ಪ್ರೇಮಗೀತೆ. ಇದೀಗ ಇಬ್ಬರ ಜೊತೆಯೂ ಮದುವೆಯಾಗದೇ ಪರದಾಡುವಂತಾಗಿದೆ. ಇಂಥದ್ದೊಂದು ಡಬಲ್ ಲವ್  ಕಹಾನಿಗೆ ಸಾಕ್ಷಿಯಾಗಿದ್ದು ಶಿವಮೊಗ್ಗದ ಮಹಿಳಾ ಪೋಲಿಸ್ ಠಾಣೆ.

ಶಿವಮೊಗ್ಗದ ಯುವತಿಯೊಬ್ಬಳಿಗೂ ವೃತ್ತಿಯಲ್ಲಿ ಚಾಲಕನಾಗಿರುವ ಯುವಕನಿಗೂ  ಕಳೆದ 4-5 ತಿಂಗಳ ಹಿಂದೆ ಲವ್ ಆಗಿದೆ. ನಂತರ ಎರಡು ಕುಟುಂಬದವರು  ಒಪ್ಪಿಕೊಂಡು ಕಳೆದ ತಿಂಗಳ 29 ರಂದು ನಿಶ್ಚಿತಾರ್ಥ ಮಾಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥದ ಫೋಟೋ ನೋಡಿದ ಆಕೆಯ ಸ್ನೇಹಿತ  ಈ ಹಿಂದೆ ಅವಳು  ಡ್ರೈವರ್ ಜೊತೆ ಓಡಿಹೋಗಿದ್ದಳು ಅನ್ನೋ ಗುಟ್ಟನ್ನ ಬಹಿರಂಗೊಳಿಸಿದ್ದಾನೆ.

2 ವರ್ಷದ ಹಿಂದೆ ಅವಳುಫಸ್ಟ್ ಪಿಯುಸಿ ಓದುತ್ತಿದ್ದಾಗ  ಯುವಕನ ಜೊತೆ ಓಡಿ ಹೋಗಿದ್ದಳಂತೆ. ಅಪ್ರಾಪ್ತಳ ಸಹವಾಸ ಮಾಡಿದ್ದಕ್ಕೆ  ಯುವಕ  ಪೋಕ್ಸೋ ಕಾಯ್ದೆಯಡಿ ಜೈಲು ಪಾಲಾಗಿದ್ದ. ಈಗ ಫಸ್ಟ್ ಬಿಎ ಓದುತ್ತಿರುವ ಯುವತಿ , ಇನ್ನೋರ್ವ ಯುವಕನ ಲವ್ ಮಾಡಿ ಮದುವೆಯಾಗಲು ಹೊರಟಿದ್ದಳು.  ಆದರೀಗ  ಪ್ರೇಯಸಿಯ ಹಳೇ ಲವ್ ಸ್ಟೋರಿ ಕೇಳಿ ಆತ ಮದುವೆಗೆ ನಿರಾಕರಿಸಿದ್ದು,  ಆಕೆ ಈತನ ವಿರುದ್ಧ ಮಹಿಳಾ ಠಾಣೆ ಮೆಟ್ಟಿಲೇರಿದ್ದಾಳೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?