ಚಿನ್ನ ಕದಿಯಲು ಬಂದ ಕಳ್ಳರಿಗೆ ಆಯ್ತು ಶಾಸ್ತಿ

Published : Mar 16, 2018, 10:14 PM ISTUpdated : Apr 11, 2018, 12:56 PM IST
ಚಿನ್ನ ಕದಿಯಲು ಬಂದ ಕಳ್ಳರಿಗೆ ಆಯ್ತು ಶಾಸ್ತಿ

ಸಾರಾಂಶ

ಚಿನ್ನದ ಆಭರಣದಲ್ಲಿ ವ್ಯತ್ಯಾಸವಾಗಿದೆ ಎಂದು ಪರಿಶೀಲಿಸಿದ ವೀಣಾ ಅವರು ಕದ್ದ  ವಿಷಯ ಗೊತ್ತಾಗಿ ಕಳ್ಳರಿಗೆ ಸಕತ್ ಗೂಸಾ ನೀಡಿದ್ದಾರೆ.

ದಾವಣಗೆರೆ(ಮಾ.16): ಪಾಲಿಷ್‌‌‌ ಮಾಡುವ ನೆಪದಲ್ಲಿ‌ ಚಿನ್ನ ಕದಿಯಲು ಬಂದ ಕಳ್ಳರಿಗೆ ಹರಿಹರದಲ್ಲಿ ತಕ್ಕ ಶಾಸ್ತಿಯಾಗಿದೆ. ಉತ್ತರ ಪ್ರದೇಶ ಮೂಲದ ಕಳ್ಳರು ಚಿನ್ನ ಬೆಳ್ಳಿಪಾಲಿಷ್ ಮಾಡುವ ನೆಪದಲ್ಲಿ ಹರಿಹರದ ಗುತ್ತೂರಿಗೆ ಬಂದಿದ್ದಾರೆ. ವೀಣಾ ಎಂಬುವರ ಬೆಳ್ಳಿ ಅಭರಣ ಪಡೆದು ಪಾಲಿಶ್ ಮಾಡಿದ್ದರು. ಬಳಿಕ ಚಿನ್ನದ ಆಭರಣಗಳನ್ನು ಕೇಳಿದ್ದರು. ಪಾಲಿಶ್ ಮಾಡುವಾಗ  ಮಹಿಳೆಯ ಕಣ್ಣುತಪ್ಪಿಸಿ ಚಿನ್ನಾಭರಣ ಲಪಟಾಯಿಸಿದ ಕಳ್ಳರು ಇನ್ನೇನು ಹೊರಡುವ ಸ್ಥಿತಿಯಲ್ಲಿದ್ದರು. ಏಕೋ ಚಿನ್ನದ ಆಭರಣದಲ್ಲಿ ವ್ಯತ್ಯಾಸವಾಗಿದೆ ಎಂದು ಪರಿಶೀಲಿಸಿದ ವೀಣಾ ಅವರು ಕದ್ದ  ವಿಷಯ ಗೊತ್ತಾಗಿ ಕಳ್ಳರಿಗೆ ಸಕತ್ ಗೂಸಾ ನೀಡಿದ್ದಾರೆ. ಈ ಸಂದರ್ಭದಲ್ಲಿ  ಮೂವರಲ್ಲಿ  ಇಬ್ಬರು ಪರಾರಿಯಾಗಿ  ಒಬ್ಬ ಸಿಕ್ಕಿಬಿದ್ದಿದ್ದಾನೆ. ಸಿಕ್ಕ ಕಳ್ಳನನ್ನು ಗ್ರಾಮಸ್ಥರು ಚೆನ್ನಾಗಿ ಥಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಪ್ರೀತಿಯಿಂದ ಊಟಕ್ಕೆ ಕರೀತಾರೆ ಬೇಡ ಅನ್ನೋಕಾಗುತ್ತಾ: DCM ಡಿಕೆ ಶಿವಕುಮಾರ್
ಪಿಎಂ ಫಸಲ್ ಬಿಮಾ ಯೋಜನೆ ದೊಡ್ಡ ಗೋಲ್‌ಮಾಲ್‌: ಸಚಿವ ಈಶ್ವರ್ ಖಂಡ್ರೆ ಗಂಭೀರ ಆರೋಪ