
ಮಂಡ್ಯ(ಅ.24): ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮ. ಹಿಂದೆ ಮಾರ್ಜಾಲಪುರ ಅಂತಾನೂ ಕರೀತಿದ್ದರು.. ಈ ಗ್ರಾಮಕ್ಕೆ ಬೆಕ್ಕೇ ದೇವರು. ಗ್ರಾಮಸ್ಥರು ಶುಭಕಾರ್ಯಕ್ಕೆ ಹೋಗುವ ಮುನ್ನ ಅಥವಾ ಒಂದು ಕೆಲಸ ಆರಂಭಿಸುವ ಮುನ್ನ ಮೊದಲು ಬೆಕ್ಕಿನ ದರ್ಶನ ಪಡೆಯೋದು ಗ್ರಾಮದ ಅಲಿಖಿತ ನಿಯಮ.
ಗ್ರಾಮದಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಮಂಗಳವಾರ ತಮ್ಮೂರಿನ ಈ ಮೂರು ದೇವಸ್ಥಾನದಲ್ಲಿ ಬೆಕ್ಕಿನ ಮಂಗಮ್ಮನಿಗೆ ವಿಶೇಷ ಪೂಜೆ ನಡೆಯುತ್ತೆ. ವರ್ಷಕ್ಕೊಮ್ಮೆ ಜಾತ್ರೆ ಕೂಡ ನಡೆಯುತ್ತೆ. ಅಷ್ಟೇ ಅಲ್ಲ, ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೇ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಪ್ರತಿಮನೆಯಲ್ಲೂ ಹಾಲು ಕರೆದು ಮೊದಲು ನೀಡೋದೆ ಬೆಕ್ಕಿಗೆ.
ಇನ್ನೂ ಗ್ರಾಮದಲ್ಲಿ ಬೆಕ್ಕು ಸತ್ತರೆ ಮನುಷ್ಯರಂತೆ ಶವಸಂಸ್ಕಾರ ಮಾಡುತ್ತಾರೆ. ಅಲ್ಲದೆ ಯಾರೂ ಬೆಕ್ಕನ್ನು ಹೊಡೆಯಲ್ಲ. ಅಪ್ಪಿ ತಪ್ಪಿ ಹೊಡೆದವರು ಉದ್ದಾರಾಗಿಲ್ಲ ಅನ್ನೋದನ್ನ ಸಾಕ್ಷಿ ಸಮೇತ ಬಿಚ್ಚಿಡುತ್ತಾರೆ ಗ್ರಾಮಸ್ಥರು.
ಮದುವೆ ಮುಂಜಿಯಂತಹ ಕಾರ್ಯಗಳು ಬೆಕ್ಕಿನ ದರ್ಶನವಿಲ್ಲದೆ ನಡೆಯೋದೇ ಇಲ್ಲ. ಒಟ್ಟಿನಲ್ಲಿ ಬೆಕ್ಕನ್ನ ಅನಿಷ್ಟ ಪ್ರಾಣಿ ಎಂದು ಜನ ದೂರವಿಡುವಾಗ. ಈ ಗ್ರಾಮಸ್ಥರು ದೇವತಾ ಸ್ವರೂಪಿಯಾಗಿ ನೋಡುತ್ತಿರೋದು ನಿಜಕ್ಕೂ ಅಚ್ಚರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.