
ಮೈಸೂರು(ನ.23): ಮದುವೆಗಾದರೆ ಎರಡೂವರೆ ಲಕ್ಷ ರೂಪಾಯಿ ಡ್ರಾ ಮಾಡಬಹುದೆಂದು ಕೇಂದ್ರ ಸರ್ಕಾರ ನೀಡಿದ ವಿನಾಯಿತಿ ಜನಸಾಮಾನ್ಯರಿಗೆ ಅನುಕೂಲ ಮಾಡುತ್ತಿಲ್ಲ. ಮೈಸೂರಿನ ಅಶೋಕ ರಸ್ತೆಯ ನಿವಾಸಿ ಭಾಸ್ಕರ್ ನಾಳೆ ಮಗಳ ಮದುವೆಗಾಗಿ ಹಣ ಡ್ರಾ ಮಾಡಲು ಇಂಡಿಯನ್ ಓವರ್ಸೀಸ್ ಬ್ಯಾಂಕಿಗೆ ಹೋದರೆ ಹಣ ಸಿಗುತ್ತಿಲ್ಲ.
ನವೆಂಬರ್ 8ಕ್ಕಿಂತ ಮುಂಚೆಯೇ ಖಾತೆಯಲ್ಲಿ ಎರಡೂವರೆ ಲಕ್ಷ ರೂ ಇದ್ದರೆ ಮಾತ್ರ ಡ್ರಾ ಮಾಡಬಹುದು. ಹಳೇ ನೋಟು ಕೊಟ್ಟು ಹೊಸ ನೋಟು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಭಾಸ್ಕರ್ ಪೀಕಲಾಟಕ್ಕೆ ಸಿಲುಕಿದ್ದಾರೆ. ಮದುವೆಯೆಂದ ಮೇಲೆ ಐದಾರು ಲಕ್ಷ ರೂಪಾಯಿ ಖರ್ಚಾಗುತ್ತದೆ. ನಮ್ಮ ಬಳಿ ಹಳೇ ನೋಟುಗಳಿವೆ, ಬದಲಿಸಿಕೊಡಿ ಅಂತಾ ಬ್ಯಾಂಕಿನವರಿಗೆ ಗೋಗರೆದರೂ ಹಣ ಕೊಡುತ್ತಿಲ್ಲವೆಂದು ವಧುವಿನ ತಂದೆ ಭಾಸ್ಕರ್ ಗೋಳು ತೋಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.