
ನವದೆಹಲಿ(ಸೆ.27): ಅಷ್ಟಕ್ಕೂ ಭಾರತೀಯರು ಯಾವ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ತಾರೆ?. ಮದುವೆ, ಮಕ್ಕಳು, ಸಂಸಾರ, ಖರ್ಚು ವೆಚ್ಚ? ಹೂಂ ಹೂಂ ಇದ್ಯಾವುದಕ್ಕೂ ಅಲ್ಲ.
ಭಾರತೀಯರು ಹೆಚ್ಚು ತಲೆ ಕೆಡಿಸಿಕೊಳ್ಳುವುದು ತಮ್ಮನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಅಂತೆ. ಗೋಲ್ ಕೀಪರ್ ಗ್ಲೋಬಲ್ ಯುತ್ ಔಟ್ಲುಕ್ ನಡೆಸಿದ ಸರ್ವೆಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಸರ್ವೆಯಲ್ಲಿ ಭಾಗವಹಿಸಿದ್ದ ಭಾರತೀಯರ ಪೈಕಿ ಅರ್ಧಕ್ಕೂ ಹೆಚ್ಚು ಜನರು, ತಮ್ಮನ್ನು ನಿರುದ್ಯೋಗ ಅತ್ಯಂತ ಹೆಚ್ಚು ಭಾಧಿಸುವ ಸಮಸ್ಯೆ ಎಂದು ಹೇಳಿಕೊಂಡಿದ್ದಾರಂತೆ.
ಜಾಗತಿಕವಾಗಿ ಒಟ್ಟು 40 ಸಾವಿರ ಯುವಕರನ್ನು ಸಂದರ್ಶನಕ್ಕೊಳಪಡಿಲಾಗಿತ್ತು. ಇದರಲ್ಲಿ ಸುಮಾರು 2,800 ಯುವಕರು ಭಾರತೀಯರಾಗಿದ್ದರು ಎಂದು ಔಟ್ಲುಕ್ ತಿಳಿಸಿದೆ.
ಇನ್ನು ಜಾಗತಿಕ ಸರ್ವೆಯಲ್ಲಿ ಜನ ತಮ್ಮ ಸುರಕ್ಷತೆ ಕುರಿತು ಹೆಚ್ಚು ಚಿಂತಾಕ್ರಾಂತರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳು ತಮ್ಮ ಸುರಕ್ಷತೆ ಕರಿತು ಚಿಂತೆ ಮಾಡುವಂತೆ ಮಾಡಿವೆ ಎಂದು ಜನರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.