
ಬ್ಯಾಂಕಾಕ್[ಜು.9] ಥಾಯ್ಲಂಡ್ ಗುಹೆಯೊಳಗೆ ಬಂಧಿಯಾಗಿರುವ 12 ಮಂದಿ ಬಾಲಕರು ಮತ್ತು ಅವರ ಕೋಚ್ ಪೈಕಿ ಇಂದು ನಾಲ್ವರು ಬಾಲಕರನ್ನು ರಕ್ಷಿಸಲಾಗಿದೆ. ಇದರೊಂದಿಗೆ ಈ ವರೆಗೆ ಗುಹೆಯಿಂದ ಎಂಟು ಬಾಲಕರನ್ನು ಹೊರಗೆ ತಂದಂತಾಗಿದೆ.
ಭಾನುವಾರ ನಾಲ್ಕು ಬಾಲಕರನ್ನು ರಕ್ಷಣಾ ತಂಡ ಹರಸಾಹಸ ಪಟ್ಟು ರಕ್ಷಿಸಿತ್ತು. ರಕ್ಷಣೆಯಾದ ಬಾಲಕರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿತ್ತು. ನಿಜಕ್ಕೂ ರಕ್ಷಣಾ ಕಾರ್ಯ ನಡೆಯುವ ರೀತಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಬಾಲಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಹದಿಮೂರು ವಿದೇಶಿ ಡೈವರ್ಗಳು, ಐವರು ಥಾಯ್ಲಂಡ್ನ ಉನ್ನತ ನೇವಿ ಸೀಲ್ ತಂಡದವರು ಇದ್ದಾರೆ.
ಗುಹೆಯೊಳಗೆ ಸಿಲುಕಿ ಸಂಕಷ್ಟದಲ್ಲಿರುವ ಬಾಲಕರ ರಕ್ಷಣೆಗೆ 'ಮಕ್ಕಳ ಗಾತ್ರದ ಸಬ್ಮೆರಿನ್'ಗಳನ್ನು ಅಮೆರಿಕ ರವಾನಿಸಲಿದೆ. ಲಾಸ್ ಏಂಜಲಿಸ್ನಲ್ಲಿರುವ ಸ್ಪೇಸ್ ಎಕ್ಸ್ ಮತ್ತು ಟೆಲ್ಸಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ತಮ್ಮ ಬಳಿ ಇರುವ ಮಕ್ಕಳ ಗಾತ್ರದ ಸಬ್ಮೆರಿನ್ಗಳನ್ನು ಥಾಯ್ಲೆಂಡ್ಗೆ ರವಾನಿಸುವುದಾಗಿ ಹೇಳಿದ್ದು ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ತರುತ್ತೇವೆ ಎಂದು ರಕ್ಷಣಾ ಪಡೆಯ ಯೋಧರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.