
ಶ್ರೀನಗರ(ಆ.31): ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, 5 ಪೊಲೀಸರ ಮನೆಗಳಿಗೆ ನುಗ್ಗಿರುವ ಉಗ್ರರು, 9 ಮಂದಿಯನ್ನು ಅಪಹರಣ ಮಾಡಿ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದಾರೆ.
ಶೋಪಿಯಾನ್, ಕುಲ್ಗಾಮ್, ಅನಂತ್ ನಾಗ್ ಮತ್ತು ಅವಂತಿಪೋರಾದಲ್ಲಿರುವ ಪೊಲೀಸರ ಮನೆಗಳಿಗೆ ನಿನ್ನೆ ತಡರಾತ್ರಿ ರಾತ್ರಿ ನುಗ್ಗಿರುವ ಉಗ್ರರು, 9 ಮಂದಿಯನ್ನು ಅಪಹರಣ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಅಹಕರಣಕ್ಕೊಳಗಾಗಿರುವವರನ್ನು ಅರಾವಾನಿ ನಿವಾಸಿಯಾಗಿರುವ ಪೊಲೀಸ್ ಮೊಹಮ್ಮದ್ ಮುಕ್ಭೂಲ್ ಭಟ್ ಪುತ್ರ ಜುಬೈರ್ ಅಹ್ಮದ್ ಭಟ್, ಪೊಲೀಸ್ ಅಧಿಕಾರಿ ನಾಝೀರ್ ಅಹ್ಮದ್ ಶಂಕರ್ ಸಹೋದರ ಆರೀಫ್ ಅಹ್ಮದ್ ಸಂಕರ್, ಪೇದೆ ಬಶೀರ್ ಅಹ್ಮದ್ ಮಕ್ರೋ ಪುತ್ರ ಫೈಜಾನ್ ಅಹ್ಮದ್ ಮಕ್ರೋ, ಪೊಲೀಸ್ ಅಬ್. ಸಲಾರ್ ರಥೆರ್ ಪುತ್ರ ಸುಮರ್ ಅಹ್ಮದ್ ರಾಥೆರ್, ಡಿಎಸ್'ಪಿ ಐಜಾಜ್ ಸಹೋದರ ಗೊಹೆರ್ ಅಹ್ಮದ್ ಮಲಿಕ್, ಪೊಲೀಸ್ ಅಧಿಕಾರಿ ಬಷೀರ್ ಅಹ್ಮದ್ ಭಟ್ ಅವರ ಪುತ್ರ ಯಾಸಿರ್ ಅಹ್ಮದ್ ಭಟ್, ಪೊಲೀಸರಾದ ನಾಸೀರ್ ಅಹ್ಮದ್ ಮತ್ತು ಶಬೀರ್ ಅಹ್ಮದ್ ಜರ್ಗರ್, ಆಸೀಫ್ ಅಹ್ಮದ್ ರಾಥೆರ್ ಎಂದು ಗುರುತಿಸಲಾಗಿದೆ.
ದಕ್ಷಿಣ ಕಾಶ್ಮೀರ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಉಗ್ರರ ಮನೆಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ಅವರ ಸಂಬಂಧಿಕರನ್ನು ಬಂಧನಕ್ಕೊಳಪಡಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇದೀಗ ಉಗ್ರರು ಪೊಲೀಸರು ಹಾಗೂ ಅವರ ಸಂಬಂಧಿಕರನ್ನು ಅಪಹರಣ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.