ದೇವಾಲಯ ಕೆಡವಿದ್ದಕ್ಕೆ ಎರಡು ಕೋಮಿನ ನಡುವೆ ಸಂಘರ್ಷ

Published : Jul 02, 2019, 02:02 PM ISTUpdated : Jul 02, 2019, 02:15 PM IST
ದೇವಾಲಯ ಕೆಡವಿದ್ದಕ್ಕೆ ಎರಡು  ಕೋಮಿನ ನಡುವೆ ಸಂಘರ್ಷ

ಸಾರಾಂಶ

ಪಾರ್ಕಿಂಗ್ ಜಾಗಕ್ಕಾಗಿ ದೇವಾಲಯ ಉರುಳಿಸಿದ್ದು, ಇದರಿಂದ ಎರಡು ಗುಂಪುಗಳ ನಡುವೆ ತೀವ್ರ ಸಂಘರ್ಷ ನಡೆದಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

ನವದೆಹಲಿ [ಜು.2] : ಇಲ್ಲಿನ ಹಜ್ ಕ್ವಾಜಿ  ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಾರ್ಕಿಂಗ್ ಜಾಗಕ್ಕಾಗಿ ದೇವಾಲಯವನ್ನು ಉರುಳಿಸಿದ್ದು, ಈ ನಿಟ್ಟಿನಲ್ಲಿ ಎರಡು ಕೋಮಿನ ನಡುವೆ ಗಲಭೆ ನಡೆದಿದೆ. 

ಹಜ್ ಕ್ವಾಜಿ ಪ್ರದೇಶದಲ್ಲಿ ತೀವ್ರ ಗಲಭೆಯಿಂದ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಜನರು ಶಾಂತಿ ಕಾಪಾಡಿ. ಇಲ್ಲಿನ ಸಮಸ್ಯೆ ನಿವಾರಣೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಇಲ್ಲಿನ ಡಿಸಿಪಿ  ಮನ್ ದೀಪ್ ಸಿಂಗ್ ಜನರಲ್ಲಿ ಮನವಿ ಮಾಡಿದ್ದಾರೆ. 

 

ದೇವಾಲಯ ಉರುಳಿಸಿರುವುದು ಎರಡು ಕೋಮಿನ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ. 

ಪರಸ್ಪರ ಎರಡು  ಕೋಮಿನ ನಡುವೆ ಗಲಭೆ ನಡೆದಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಅತ್ಯಧಿಕ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನ, ಬ್ಯಾಂಕ್ ಠೇವಣಿ, ಷೇರು; ಯಾವುದು ಬೆಸ್ಟ್? 40 ವರ್ಷ ಹಿಂದೆ ₹100 ಹೂಡಿಕೆ ಮಾಡಿದ್ರೆ ಈಗ ಎಷ್ಟಾಗುತ್ತಿತ್ತು?
ಕೋಳಿಗಳಲ್ಲಿ ಹಕ್ಕಿ ಜ್ವರ ಆತಂಕ; ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಚಿಕನ್ ಊಟಕ್ಕೆ FSSAI ನಿಷೇಧ!