ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ. ಜುನೈದ್ ಹಾಗೂ ಆತನಿಬ್ಬರು ಸಹೋದರರು ಶುಕ್ರವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಪಲ್ವಾಲ್, ಹರ್ಯಾಣ: ರೈಲಿನಲ್ಲಿ ಸೀಟ್ ವಿಚಾರವಾಗಿ ಆರಂಭವಾದ ಜಗಳವು ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹರ್ಯಾಣದ ಪಲ್ವಾಲ್’ನಲ್ಲಿ ನಡೆದಿದೆ.
ಜುನೈದ್ ಹಾಗೂ ಆತನಿಬ್ಬರು ಸಹೋದರರು ಗುರುವಾರ ದೆಹಲಿಯಲ್ಲಿ ಈದ್ ಖರೀದಿ ಮುಗಿಸಿ ತಮ್ಮ ಊರು ಬಲ್ಲಾಬ್’ಗಢಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ರೈಲಿನಲ್ಲಿ ಸೀಟು ವಿಚಾರವಾಗಿ ಇತರ ಪ್ರಯಾಣಿಕರೊಂದಿಗೆ ಮಾತಿಗೆ ಮಾತು ಬೆಳೆದಿದೆ, ಆ ಸಂದರ್ಭದಲ್ಲಿ ಒಬ್ಬ ಜುನೈದ್’ಗೆ ಚಾಕುವಿನಿಂದ ಇರಿದಿದ್ದಾನೆ. ಗುಂಪು ಬಳಿಕ ಜುನೈದ್’ನ ಸಹೋದರರಿಗೆ ಬರ್ಬರವಾಗಿ ಥಳಿಸಿದೆ.
ಥಳಿಸುವ ಮುನ್ನ ಅವರು ತಮ್ಮ ಚೀಲಗಳಲ್ಲಿ ಗೋಮಾಂಸ ಕೊಂಡೊಯ್ಯುತ್ತಿದ್ದಾರೆಂದು ಗುಲ್ಲೆಬ್ಬಿಸಲಾಗಿತ್ತು ಎಂದು ವರದಿಯಾಗಿದೆ. ನಮ್ಮನ್ನು ಥಳಿಸುವಾಗ ಆ ಗುಂಪು ನಮ್ಮ ಧರ್ಮವನ್ನು ನಿಂದಿಸಿತಲ್ಲದೇ, ಗೋಮಾಂಸ ತಿನ್ನುವವರೆಂದು ಹೀಯಾಳಿಸಲಾಯಿತೆಂದು ಓರ್ವ ಸಹೋದರ ಏಎನ್’ಐಗೆ ತಿಳಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ.