
ಹುಬ್ಬಳ್ಳಿ: ‘ಚುನಾವಣಾ ಪ್ರಚಾರಕ್ಕೆಂದು ಹುಬ್ಬಳ್ಳಿ ಮೂಲಕ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಲು ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿದ್ದ ವಿಶೇಷ ವಿಮಾನ ಇದ್ದಕ್ಕಿದ್ದಂತೆ ಆಗಸದಲ್ಲಿದ್ದಾಗಲೇ ಕೆಳಗೆ ಕುಸಿದಂತಾಯಿತು.
ವಿಮಾನವು ಎಡಭಾಗಕ್ಕೆ ವಾಲಿದಂತಾಯಿತು. ೨ ಬಾರಿ ವಿಮಾನವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಸಲು ಪೈಲಟ್ ಪ್ರಯತ್ನಿಸಿದರೂ ಪೈಲಟ್ಗೆ ಸಾಧ್ಯವಾಗಲಿಲ್ಲ.
ಇಷ್ಟೆಲ್ಲ ಆದರೂ ಕೂಡ ರಾಹುಲ್ ಗಾಂಧಿ ಅವರು ಪೈಲಟ್ ಬಳಿಯೇ ತಾಳ್ಮೆಯಿಂದ ನಿಂತು ಧೈರ್ಯ ತುಂಬಿದರು. ಇಂದು ನಾವು ಬದುಕಿ ಉಳಿದಿದ್ದೇ ಹೆಚ್ಚು.
ಇಂಥ ಭಯಾನಕ ಅನುಭವ ಎಂದೂ ಆಗಿರಲಿಲ್ಲ.’ - ಇದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಕೌಶಲ್ ವಿದ್ಯಾರ್ಥಿ ಗುರುವಾರ ತಮ್ಮ ‘ಭಯಂಕರ ಅನುಭವ’ದ ಬಗ್ಗೆ ಮಾಡಿದ ಟ್ವೀಟ್.
ಅಲ್ಲದೆ, ಕರ್ನಾಟಕ ಡಿಜಿಪಿ ನೀಲಮಣಿ ರಾಜು ಅವರಿಗೆ ಈ ಸಂಬಂಧ ಸವಿಸ್ತಾರವಾದ ದೂರನ್ನೂ ಕೊಟ್ಟಿರುವ ಅವರು, ರಾಹುಲ್ ಅವರಂಥ ಅತಿಗಣ್ಯ ವ್ಯಕ್ತಿಯ ವಿಮಾನ ೨ ಬಾರಿ ತಾಂತ್ರಿಕ ತೊಂದರೆಗೆ ಒಳಗಾಗಿ ಭೂಸ್ಪರ್ಶ ಮಾಡಲು ಆಗದೆ ಆತಂಕ ಎದುರಾದ ಬಗ್ಗೆ ವಿವರಿಸಿದ್ದಾರೆ.
ಈ ಬಗ್ಗೆ ಸಮಗ್ರ ತನಿಖೆಗೂ ಕೋರಿ ದ್ದಾರೆ. ಇದರ ಬೆನ್ನಲ್ಲೇ, ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ ದೂರನ್ನು ಕೂಡ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ