ಧ್ವಂಸ ಭೀತಿ : ಮನೆ ಹುಡುಕಲು ಆಪ್ತರಿಗೆ ನಾಯ್ಡು ಸೂಚನೆ

Published : Jun 28, 2019, 10:00 AM IST
ಧ್ವಂಸ ಭೀತಿ : ಮನೆ ಹುಡುಕಲು ಆಪ್ತರಿಗೆ ನಾಯ್ಡು ಸೂಚನೆ

ಸಾರಾಂಶ

ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೊಸ ಮನೆಗಾಗಿ ಹುಡುಕಾಟ ನಡೆಸುತಿದ್ದಾರೆ. ಸದ್ಯ ವಾಸವಿರುವ ಮನೆ ಧ್ವಂಸ ಮಾಡುವ ಭೀತಿಯಿಂದ ಮನೆ ನೋಡುತಿದ್ದಾರೆ. 

ಹೈದ್ರಾಬಾದ್‌ [ಜೂ.28] : ತಾವು ಸಿಎಂ ಆಗಿದ್ದಾಗ ನಿರ್ಮಿಸಿದ್ದ ಪ್ರಜಾವೇದಿಕೆ ಸರ್ಕಾರಿ ಕಟ್ಟಡವನ್ನು ನೂತನ ಸಿಎಂ ಜಗನ್‌ಮೋಹನ್‌ ರೆಡ್ಡಿ ಸರ್ಕಾರ ಉರುಳಿಸಿದ ಬೆನ್ನಲ್ಲೇ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ತಾವು ವಾಸ ಇರುವ ಮನೆಯನ್ನು ಸರ್ಕಾರ ಉರುಳಿಸುವ ಭೀತಿ ಎದುರಾಗಿದೆ. 

ಹೀಗಾಗಿ ತಮಗೆ ಸೂಕ್ತ ಹೊಸ ಮನೆ ಹುಡುಕಿ ಎಂದು ಆಪ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ನಾಯ್ಡು ಅವರು ಹಾಲಿ ಕೃಷ್ಣಾ ನದಿ ತೀರದಲ್ಲಿ ಉದ್ಯಮಿಯೊಬ್ಬರು ನಿರ್ಮಿಸಿರುವ ಐಷಾರಾಮಿ ಬೃಹತ್‌ ಬಂಗಲೆ ಲೀಸ್‌ ಪಡೆದು ವಾಸವಿದ್ದಾರೆ. 

ಆದರೆ ಇದು ನದಿ ತೀರದಲ್ಲಿ ಕಟ್ಟಿದ ಕಾರಣ ಅಕ್ರಮ ಎಂದು ವೈಎಸ್‌ಎಸ್‌ ಕಾಂಗ್ರೆಸ್‌ ಕೋರ್ಟ್‌ ಮೆಟ್ಟಿಲೇರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು