
ಮುಂಬೈ [ಜೂ.28] : ಹಾಲಿನ ಪ್ಯಾಕ್ ಖಾಲಿಯಾದ ಬಳಿಕ ಎಲ್ಲೆಂದರಲ್ಲಿ ಎಸೆದು ಉಂಟಾಗುವ ಪರಿಸರ ಮಾಲಿನ್ಯ ತಡೆಗೆ ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ.
ಅದರನ್ವಯ, ಇನ್ನು ಮುಂದೆ ಅರ್ಧ ಲೀ. ಹಾಲಿನ ಪ್ಯಾಕೆಟ್ ಖರೀದಿಸಿದರೆ ಅದಕ್ಕೆ 50 ಪೈಸೆ ಹಣವನ್ನು ಅಂಗಡಿಯವರಿಗೆ ಠೇವಣಿಯಾಗಿ ನೀಡಬೇಕು. ಮುಂದಿನ ಬಾರಿ ಗ್ರಾಹಕ ಹಾಲು ಖರೀದಿಗೆ ಹೋದಾಗ ಖಾಲಿ ಪ್ಯಾಕ್ ನೀಡಿದರೆ 50 ಪೈಸೆ ಮರಳಿ ನೀಡಲಾಗುತ್ತದೆ.
ಇಲ್ಲದೇ ಹೋದಲ್ಲಿ ಆ ಹಣವನ್ನು ಅಂಗಡಿ ಸರ್ಕಾರಕ್ಕೆ ನೀಡುತ್ತಾನೆ. ದಿನಂಪ್ರತಿ 1 ಕೋಟಿ ರು. ಮೌಲ್ಯದ ಹಾಲಿನ ಪೌಚ್ಗಳು ಬೀದಿಗಳಲ್ಲಿ ಕಾಣಸಿಗುತ್ತಿದ್ದು, ಇದರಿಂದ ಮಾಸಿಕ ಬೀದಿ ಬದಿಯಲ್ಲಿ ಹಾರಾಡುವ 31 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಳವಾಗಿ ನಿರ್ವಹಿಸಲು ಸಾಧ್ಯವಿದೆ ಎಂದು ಮಹಾ ಸರ್ಕಾರ ಅಂದಾಜಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.