
ನವದೆಹಲಿ: ವಿಶ್ವವಿಖ್ಯಾತ ತಾಜ್ ಮಹಲ್ ಶೀಘ್ರದಲ್ಲೇ ‘ತೇಜ್ ಮಂದಿರ’ವಾಗಲಿರುವುದು ಎಂದು ಹೇಳುವ ಮೂಲಕ ಬಿಜೆಪಿ ಸಂಸದ ವಿನಯ ಕಟಿಯಾರ್ ವಿವಾದವನ್ನೆಬ್ಬಿಸಿದ್ದಾರೆ.
ಆಗ್ರಾದಲ್ಲಿ ಹಮ್ಮಿಕೊಳ್ಳಲಾಗಿರುವ ‘ತಾಜ್ ಮಹೋತ್ಸವ್’ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಕಟಿಯಾರ್, ತಾಜ್ ಮಹೋತ್ಸವ ಅಥವಾ ತೇಜ್ ಮಹೋತ್ಸವ ಎರಡೂ ಒಂದೇ. ಅವುಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಶೀಘ್ರದಲ್ಲೇ ತಾಜ್ ಮಹಲನ್ನು ತೇಜ್ ಮಂದಿರವಾಗಿ ಮಾರ್ಪಾಡು ಮಾಡಲಾಗುವುದು, ಎಂದು ಹೇಳಿದ್ದಾರೆ.
ಈ ಹಿಂದೆ, ತಾಜ್ ಮಹಲ್ ಶಿವ ಮಂದಿರವಾಗಿತ್ತು ಎಂದು ಹೇಳುವ ಮೂಲಕ ಕಟಿಯಾರ್ ವಿವಾದವನ್ನು ಸೃಷ್ಟಿಸಿದ್ದರು.
ತಾಜ್ ಮಹಲ್ ಈ ಹಿಂದೆ ಶಿವಮಂದಿರವಾಗಿತ್ತು. ಅದರಲ್ಲಿ ಶಿವಲಿಂಗವೂ ಇತ್ತು. ಮೊಘಲರು ಅದನ್ನು ತೆಗೆದು ಹಾಕಿದ್ದಾರೆ, ಎಂದು ಅವರು ಹೇಳಿದ್ದರು.
ಫೆ.18ರಿಂದ 10ದಿನಗಳ ಕಾಲ ಆಗ್ರಾದಲ್ಲಿ ತಾಜ್ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.