ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ಇಂದಿರಾ ಕ್ಯಾಂಟೀನ್'ಗೆ ಹೊಸ ಅಡುಗೆಮನೆ

Published : Aug 27, 2017, 08:15 AM ISTUpdated : Apr 11, 2018, 12:38 PM IST
ಸುವರ್ಣ ನ್ಯೂಸ್  ಇಂಪ್ಯಾಕ್ಟ್ : ಇಂದಿರಾ ಕ್ಯಾಂಟೀನ್'ಗೆ ಹೊಸ ಅಡುಗೆಮನೆ

ಸಾರಾಂಶ

ಇಂದಿರಾ ಕ್ಯಾಂಟೀನ್​ನಲ್ಲಿ ಅವ್ಯವಸ್ಥೆ, ಕಿಚನ್ ಸಮಸ್ಯೆ ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ  ಪಾಲಿಕೆ ಈಗ ಗುಣಮಟ್ಟ ಓಕೆ.. ಕಿಚನ್ ಕೂಡ ಬಲಾವಣೆ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಹಸಿವು ಮುಕ್ತ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಬಗ್ಗೆ ಆರಂಭದಿಂದಲೇ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ಊಟದಲ್ಲಿ ಕ್ವಾಲಿಟಿ ಇಲ್ಲ, ಅಡುಗೆ ಮಾಡೋ ಸ್ಥಳದಲ್ಲಿ ಸ್ವಚ್ಛತೆಯಿಲ್ಲ  ಎಂಬ ಆರೋಪ ಕೇಳಿ ಬಂತಿತ್ತು. ಸುವರ್ಣ ನ್ಯೂಸ್ ಈ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಮ್ಮ ವರದಿ ಈಗ ಫಲ ನೀಡಿದೆ.

ಇಂದಿರಾ ಕ್ಯಾಂಟೀನ್ ಅಡುಗೆ ಕಾರ್ಯ ಈಗ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿರುವ ಬಿಬಿಎಂಪಿ ಸಮುದಾಯದ ಭವನಕ್ಕೆ ಸ್ಥಳಾಂತರವಾಗಿದೆ. ಇಂದಿರಾ ಕ್ಯಾಂಟೀನ್​ಗೆ ಊಟ, ತಿಂಡಿ ಸರಬರಾಜು ಗುತ್ತಿಗೆ ಪಡೆದಿದ್ದ ಶೆಫ್ ಟಾಕ್ ಸಂಸ್ಥೆ , ಕೇತಮಾರನಹಳ್ಳಿ ಗೃಹ ನಿರ್ಮಾಣ  ಸಹಕಾರ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆಹಾರ ತಯಾರು ಮಾಡುತಿತ್ತು. ಶೂ, ಚಪ್ಪಲಿ, ಪಾತ್ರೆ ತೊಳೆಯುವ ಜಾಗದಲ್ಲೇ ಮೊಸರನ್ನ ಸಿದ್ಧವಾಗ್ತಿತ್ತು. ಸುವರ್ಣ ನ್ಯೂಸ್ ಎಕ್ಸ್ ಕ್ಲೂಸಿವ್ ವರದಿ ಬಿತ್ತರಿಸಿದ ಬೆನ್ನಲ್ಲೇ ಅಡುಗೆ ಜಾಗ ಬದಲಾವಣೆಯಾಗಿದೆ.

ಇನ್ನೂ ಹೊಸ ಜಾಗದಲ್ಲಿ ಅಚ್ಚುಕಟ್ಟಾಗಿ ಅಡುಗೆ ನಡೆಯುತ್ತಿದೆ. ಸ್ವಚ್ಛತೆ, ಗುಣಮಟ್ಟ ಕೂಡ ಕಾಯ್ದುಕೊಳ್ಳಲಾಗ್ತಿದೆ. ಅಷ್ಟೇ ಅಲ್ಲ, ಸ್ವಚ್ಛತಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೂಡ ಬಿಬಿಎಂಪಿ ಶೆಫ್ ಟಾಕ್ ಸಂಸ್ಥೆಗೆ ಸೂಚಿಸಿದೆ. ಇನ್ನೂ ಅಡುಗೆ ತಯಾರಿಸುವ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು  ನಿಗಾ ವಹಿಸುತ್ತಿರೋದು ಇನ್ನೊಂದು ವಿಶೇಷ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ: ಸಚಿವ ಎಂ.ಬಿ.ಪಾಟೀಲ್
Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ