
ಬೆಂಗಳೂರು (ನ.23): ಇದು ಇಡೀ ರಾಜ್ಯವೇ ಬೆಚ್ಚಿಬೀಳುವ ಮರ್ಡರ್ ಮಿಸ್ಟರಿ! ರಾಜ್ಯದ ಪ್ರಭಾವಿ ಸಚಿವರೊಬ್ಬರ ಬಣ್ಣವನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.
ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಮೆಗಾಟ್ವಿಸ್ಟ್ ಸಿಕ್ಕಿದೆ. ಜೂನ್ 15, 2016ರಂದು ಹಾಡಹಗಲೇ ಕಾರಿನಲ್ಲಿ ಬಂದ 6 ಮಂದಿ ಅಪರಿಚಿತರು ಯೋಗೀಶ್ ಗೌಡರನ್ನು ಹತ್ಯೆಗೈದಿದ್ದರು. ಈ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಬಲವಾದ ಆರೋಪ ಕೇಳಿ ಬರುತ್ತಿದೆ. ಯೋಗೀಶ್ ಗೌಡ ಕುಟುಂಬದ ಜೊತೆ ರಾಜೀ ಸಂಧಾನಕ್ಕೆ ಸಚಿವ ವಿನಯ್ ಕುಲಕರ್ಣಿ ಯತ್ನಿಸಿದರಾ? ಎಂಬ ಸಂಶಯ ದಟ್ಟವಾಗಿದೆ. ಈ ಎಲ್ಲದರ ಬಗ್ಗೆ ಸುವರ್ಣ ನ್ಯೂಸ್ ಬಳಿಯಿದೆ E ವಿಡಿಯೋ ಮತ್ತು ಆಡಿಯೋ ಸಾಕ್ಷ್ಯಗಳು.
ಕೊಲೆ ಪ್ರಕರಣದ ಸತ್ಯ ಹೇಳೋದಿಕ್ಕೆ ಸುವರ್ಣ ನ್ಯೂಸ್ ಸ್ಟುಡಿಯೋಗೆ ಬಂದಿದ್ದಾರೆ ಯೋಗೀಶ್ ಗೌಡ ಕುಟುಂಬಸ್ಥರು. ಯೋಗೀಶ್ ಗೌಡ ಕೊಲೆಯಾಗಿದ್ದು ಏಕೆ ? ಕೊಲೆ ಹಿಂದಿನ ರಹಸ್ಯ ಏನು ? ಯೋಗೀಶ್ ಗೌಡಗೂ- ಸಚಿವ ವಿನಯ್ ಕುಲಕರ್ಣಿಗೂ ಇರೋ ದ್ವೇಷ ಏನು? ಸಚಿವ ವಿನಯ್ ಕುಲಕರ್ಣಿ ರಾಜಿ ಸಂಧಾನಕ್ಕೆ ಮುಂದಾಗಿದ್ದು ಏಕೆ ? ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಸ್ಫೋಟಕ ಸತ್ಯಗಳನ್ನು ಬಹಿರಂಗಪಡಿಸಲಿದ್ದಾರೆ ಯೋಗೀಶ್ ಗೌಡ ಕುಟುಂಬಸ್ಥರು.
ಈ ವಿಚಾರವನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡುತ್ತಿದ್ದಂತೆ ಅತ್ತ ಬೆಳಗಾವಿಯಲ್ಲಿ ಕಲಾಪ ಆರಂಭವಾದ ಕೂಡಲೇ ಸಚಿವ ವಿಶ್ವೇಶ್ವರ ಹೆಗಡೆ ಕಾವೇರಿ ಇದನ್ನು ಪ್ರಸ್ತಾಪಿಸಿದರು. ಈ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಸಚಿವ ಜಾರ್ಜ್ ಪ್ರಕರಣದಲ್ಲೂ ಸರ್ಕಾರ ಸರಿಯಾದ ಉತ್ತರ ನೀಡುತ್ತಿಲ್ಲ. ವಿನಯ್ ಕುಲಕರ್ಣಿ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಹಲವು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ವಿಶ್ವೇಶ್ವರ ಹೆಗಡೆ ಆಗ್ರಹಿಸಿದ್ದಾರೆ.
ಇನ್ನೂ ವಿಧಾನ ಪರಿಷತ್'ನಲ್ಲೂ ಕೂಡಾ ಈ ವಿಚಾರ ಪ್ರತಿಧ್ವನಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.