ಸರ್ಜಿಕಲ್ ದಾಳಿಯ ಆಯ್ಕೆ ಇನ್ನೂ ಇದೆ; ಪಾಕ್'ಗೆ ರಾವತ್ ಪರೋಕ್ಷ ಎಚ್ಚರಿಕೆ

Published : Jan 13, 2017, 05:38 AM ISTUpdated : Apr 11, 2018, 12:56 PM IST
ಸರ್ಜಿಕಲ್ ದಾಳಿಯ ಆಯ್ಕೆ ಇನ್ನೂ ಇದೆ; ಪಾಕ್'ಗೆ ರಾವತ್ ಪರೋಕ್ಷ ಎಚ್ಚರಿಕೆ

ಸಾರಾಂಶ

ಗಡಿನುಸುಳುವ ಪ್ರಯತ್ನಗಳು ನಿನ್ನೆಯೂ ನಡೆದಿದ್ದು ಗಡಿ ನಿಯಂತ್ರಣ ರೇಖೆಯ ಪೂಂಚ್ ಸೆಕ್ಟರ್'ನಲ್ಲಿ ಇಬ್ಬರು ಉಗ್ರವಾದಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ.

ನವದೆಹಲಿ(ಜ.13): ಅವಶ್ಯಕತೆ ಉಂಟಾದರೆ ಭಾರತೀಯ ಸೇನೆ ಗಡಿಬಾಗದಲ್ಲಿ ಸರ್ಜಿಕಲ್ ದಾಳಿ ನಡೆಸಲಿದೆ ಎಂದು ನೂತನ ಸೇನಾ ಮುಖ್ಯಸ್ಥ ಜೆನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, 'ಇತ್ತೀಚಿನ ದಿನಗಳಲ್ಲಿ ಗಡಿರೇಖೆ ಉಲ್ಲಂಘಿಸುವವರ ಸಂಖ್ಯೆ ಕಡೆಮೆಯಾಗುತ್ತಾ ಬಂದಿದೆ. ಇದು ನಿಲ್ಲದಿದ್ದರೆ ಮತ್ತೊಮ್ಮೆ ಸರ್ಜಿಕಲ್ ದಾಳಿ ನಡೆಸಲು ಸೇನೆ ಸಿದ್ಧವಿದೆ' ಎಂದು ಪಾಕ್'ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಗಡಿನುಸುಳುವ ಪ್ರಯತ್ನಗಳು ನಿನ್ನೆಯೂ ನಡೆದಿದ್ದು ಗಡಿ ನಿಯಂತ್ರಣ ರೇಖೆಯ ಪೂಂಚ್ ಸೆಕ್ಟರ್'ನಲ್ಲಿ ಇಬ್ಬರು ಉಗ್ರವಾದಿಗಳನ್ನು ಹೊಡೆದುರುಳಿಸಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ.

ಸೆಪ್ಟಂಬರ್'ನಲ್ಲಿ ನಡೆಸಿದ ಸರ್ಜಿಕಲ್ ದಾಳಿಯನ್ನು ವಿಶ್ಲೇಷಿಸಿದ ರಾವತ್, ಗಡಿ ನುಸುಳುವಿಕೆಯ ಬಗ್ಗೆ ಮೃದು ಧೋರಣೆ ತಳೆದರೆ ಭಯೋತ್ಪಾದಕರಿಗೆ ಬೆಂಬಲ ನೀಡಿದಂತಾಗುತ್ತದೆ. ಸರಿಯಾದ ಸಂದೇಶ ನೀಡುವ ಸಲುವಾಗಿ ಸರ್ಜಿಕಲ್ ದಾಳಿ ನಡೆಸುವ ಮೂಲಕ ಸ್ಪಷ್ಟ ಸಂದೇಶ ನೀಡಲಾಗಿದೆ. ಅಗತ್ಯಬಿದ್ದರೆ ಮುಂದೆಯೂ ಸರ್ಜಿಕಲ್ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ರಾವತ್ ಹೇಳಿದ್ದಾರೆ.

ಇದೇ ವೇಳೆ ಆಕಸ್ಮಿಕವಾಗಿ ಗಡಿನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದಲ್ಲಿ ಸೆರೆಯಾಗಿರುವ ಭಾರತೀಯ ಯೋಧ ಚಂದು ಚೌಹ್ಹಾನ್ ಬಿಡುಗಡೆ ಮಾಡುವುದಾಗಿ ಪಾಕ್ ಸೇನಾಧಿಕಾರಿಗಳು ತಿಳಿಸಿದ್ದಾರೆಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!