ಶಬರಿಮಲೆ ಯಾತ್ರೆ : 41 ದಿನದ ಇಂದ್ರಿಯ ನಿಗ್ರಹಕ್ಕೆ ಆಕ್ರೋಶ

Published : Jul 20, 2018, 11:05 AM IST
ಶಬರಿಮಲೆ ಯಾತ್ರೆ : 41 ದಿನದ ಇಂದ್ರಿಯ ನಿಗ್ರಹಕ್ಕೆ ಆಕ್ರೋಶ

ಸಾರಾಂಶ

ಶಬರಿಮಲೆ ದೇಗುಲಕ್ಕೆ ತೆರಳುವ ಮಹಿಳೆಯರು 41  ದಿವಸದ ‘ಇಂದ್ರಿಯ ನಿಗ್ರಹ’ ವ್ರತ ಪಾಲನೆ ಮಾಡಿರಬೇಕು ಎಂದು ದೇವಾಲಯ ಆಡಳಿತ ನೋಡಿಕೊಳ್ಳುವ ದೇವಸ್ವಂ ಮಂಡಳಿ ರೂಪಿಸಿದ ನಿಯಮ ‘ಅಸಾಧ್ಯವಾದದ್ದು’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ. 

ನವದೆಹಲಿ: ಶಬರಿಮಲೆ ದೇಗುಲಕ್ಕೆ ತೆರಳುವ ಮಹಿಳೆಯರು 41  ದಿವಸದ ‘ಇಂದ್ರಿಯ ನಿಗ್ರಹ’ ವ್ರತ ಪಾಲನೆ ಮಾಡಿರಬೇಕು ಎಂದು ದೇವಾಲಯ ಆಡಳಿತ ನೋಡಿಕೊಳ್ಳುವ ದೇವಸ್ವಂ ಮಂಡಳಿ ರೂಪಿಸಿದ ನಿಯಮ ‘ಅಸಾಧ್ಯವಾದದ್ದು’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ. ದೇವಾಲಯಕ್ಕೆ ಹೋಗಲು ಗಂಡು-ಹೆಣ್ಣಿನ ನಡು ವೆ ಲಿಂಗ ತಾರತಮ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮರುದಿನ ವೇ ಕೋರ್ಟ್ ಮತ್ತೊಂದು ಕಟು ಟೀಕೆ ಮಾಡಿದೆ. 

ಶಬರಿಮಲೆ ದೇಗುಲಕ್ಕೆ 10 ರಿಂದ 50 ವರ್ಷದ ವಯೋಮಾನದ ಮಹಿಳೆಯರಿಗೂ (ರಜಸ್ವಲೆಯಾಗುವ ಹೆಣ್ಣುಮಕ್ಕಳಿಗೂ) ಪ್ರವೇಶಾವಕಾಶ ನೀಡಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾ ರಣೆಯನ್ನು ಗುರುವಾರವೂ ಮುಂದುವರಿಸಿದ ಸಿಜೆಐ ನ್ಯಾ| ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ, ‘ಇಂತಹ ಅಸಾಧ್ಯ ಷರತ್ತಿನಿಂದಲೇ 10 ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶಿಸಲು ನಿಷೇಧಿಸಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು. ಜುಲೈ 24 ರಂದು ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!