ತಮಿಳುನಾಡಿಗೆ ಇಲ್ಲಿವರೆಗೂ ನೀರು ಬಿಟ್ಟಿಲ್ಲವೇಕೆ ? ಕರ್ನಾಟಕ ವಕೀಲರಿಗೆ ಸುಪ್ರೀಂ ಪ್ರಶ್ನೆ

By internet deskFirst Published Oct 3, 2016, 8:04 AM IST
Highlights

ನವದೆಹಲಿ(ಅ.03): ತಮಿಳುನಾಡಿಗೆ ಕಾವೇರಿ ನೀರು ಬಿಡದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವನ್ನ ಸುಪ್ರೀಂಕೋರ್ಟ್ ಮತ್ತೆ ತರಾಟೆ ತೆಗೆದುಕೊಂಡಿದೆ. ಇಲ್ಲಿಯವರೆಗೂ ಯಾಕೆ ನೀರು ಬಿಟ್ಟಿಲ್ಲ ಎಂದು ಕರ್ನಾಟಕ ವಕೀಲ ವಿ.ಎನ್. ರಘುಪತಿಯವರನ್ನ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸದೇ ಪುನರ್​ ಪರಿಶೀಲನಾ ಅರ್ಜಿ ಸಲ್ಲಿಸಿದ್ದೀರಿ? ತಮಿಳುನಾಡಿಗೆ ಯಾಕೆ ನೀರು ಬಿಟ್ಟಿಲ್ಲ ಎಂಬುದಕ್ಕೆ ಸ್ಪಷ್ಟನೆ ಕೊಡಿ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸದೇ ವಕೀಲ ರಘುಪತಿ ನಿಂತಿದ್ದರು. ಬಳಿಕ, ನಾಳೆ ಮಧ್ಯಾಹ್ನದೊಳಗೆ ಈ ಬಗ್ಗೆ ಸ್ಪಷ್ಟನೆ ನೀಡಲು ಸುಪ್ರೀಂಕೋರ್ಟ್ ಆದೇಶಿಸಿದೆ.

 

Latest Videos

 

click me!