ಸುಪ್ರೀಂ ಕೋರ್ಟ್ ನಮ್ಮದೇ, ರಾಮಮಂದಿರ ಖಚಿತ : ಬಿಜೆಪಿ ಸಚಿವ

Published : Sep 10, 2018, 01:00 PM ISTUpdated : Sep 19, 2018, 09:18 AM IST
ಸುಪ್ರೀಂ ಕೋರ್ಟ್ ನಮ್ಮದೇ, ರಾಮಮಂದಿರ ಖಚಿತ : ಬಿಜೆಪಿ ಸಚಿವ

ಸಾರಾಂಶ

ಸುಪ್ರೀಂಕೋರ್ಟ್ ನಮ್ಮದೇ ಆಗಿದ್ದು ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣ ಮಾಡುವುದು ಖಚಿತ ಎಂದು ಉತ್ತರ ಪ್ರದೇಶದ ಸಚಿವರು ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. 

ಲಖನೌ: ‘ಸುಪ್ರೀಂ ಕೋರ್ಟ್ ನಮ್ಮದೇ’ ಆಗಿರುವುದರಿಂದ ಅಯೋಧ್ಯೆಯಲ್ಲಿ ಬಿಜೆಪಿ ಭರವಸೆಯಂತೆ ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಉತ್ತರ ಪ್ರದೇಶ ಸರ್ಕಾರದ ಸಹಕಾರ ಸಚಿವ ಮುಕುಟ್ ಬಿಹಾರಿ ವರ್ಮಾ ಹೇಳಿದ್ದಾರೆ.

‘ಬಿಜೆಪಿ ಅಭಿವೃದ್ಧಿಯ ವಿಷಯದ ಆಧಾರದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ಇದು ನಮ್ಮ ಅಂತಿಮ ಗುರಿಯಾಗಿರುವುದರಿಂದ ರಾಮ ಮಂದಿರ ನಿರ್ಮಿಸುತ್ತೇವೆ. ವಿಷಯ ಸುಪ್ರೀಂ ಕೋರ್ಟ್ ನಲ್ಲಿದೆ ಮತ್ತು ಸುಪ್ರೀಂ ಕೋರ್ಟ್ ನಮ್ಮದು ಎಂದಿದ್ದಾರೆ. 

ಅಲ್ಲದೇ ನ್ಯಾಯಾಂಗ, ಆಡಳಿತ, ದೇಶ ಹಾಗೂ ರಾಮ ಮಂದಿರ ನಮಗೆ ಸೇರಬೇಕಾದುದು’ ಎಂದು ವರ್ಮಾ ಹೇಳಿದ್ದಾರೆ. ನ್ಯಾಯಾಂಗವೇ ನಮ್ಮದು ಎಂಬ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲಕ್ಕಾಗಿಯೇ ವಿಶೇಷ ಬ್ರೇಕ್‌ಫಾಸ್ಟ್‌ ರೆಸಿಪಿ ತಿಳಿಸಿದ ಬಾಬಾ ರಾಮ್‌ದೇವ್‌, ಇದರಿಂದ ಇದೆ ಸಾಕಷ್ಟು ಪ್ರಯೋಜನ!
ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!