
ನವದೆಹಲಿ: ನ.1ರವರೆಗೆ ದೆಹಲಿಯಲ್ಲಿ ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಮುಂದುವರೆಸಿದೆ. ದೀಪಾವಳಿ ಬಳಿಕ ವಾಯುವಿನ ಗುಣಮಟ್ಟದ ಮೇಲೆ ನಿಷೇಧದ ಪರಿಣಾಮವನ್ನು ಪರಿಶೀಲಿಸುವುದಾಗಿ ಅದು ಹೇಳಿದೆ.
ಕಳೆದ ಸೆ.12ರಂದು ಸುಡುಮದ್ದು ಹಾಗೂ ಪಟಾಕಿ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಸಡಿಲಿಸಿತ್ತು. ಕೇವಲ 500 ಮಾರಾಟಗಾರರಿಗೆ ಮಾತ್ರ ಪರವಾನಿಗೆಗಳನ್ನು ನೀಡುವಂತೆ ಸೂಚಿಸಿತ್ತು.
ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟದ ಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಕೋರಿ ಸುಡುಮದ್ದು ಮಾರಾಟಗಾರರ ಸಂಘವು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.
ಪರಿಸರದ ಮೇಲೆ ಸುಡುಮದ್ದುಗಳು ಬೀರಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವರ್ಷ ನವಂಬರ್’ 25ರಂದು ಪಟಾಕಿ ಹಾಗೂ ಸುಡುಮದ್ದುಗಳ ಮಾರಾಟವನ್ನು ನಿಷೇಧಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.