
ಮೈಸೂರು(ಅ.09): ಟಿ.ನರಸೀಪುರ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನ ಟಿಕೆಟ್ ವಾರ್ ನಡೆದಿದೆ. ಮೀಸಲು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧೆಗೆ ಆಕಾಂಕ್ಷಿಯಾಗಿರುವ ಎಸ್.ಎಸ್.ಶಂಕರ್ ಇಂದು ಮೈಸೂರಿನ ಬನ್ನೂರು ಪಟ್ಟಣದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿದರು.
ವಂಶ ಪಾರಂಪರ್ಯವಾಗಿ ಬಂದ ರಾಜಕಾರಣದಿಂದ ಬೇಸತ್ತು ಕಾಂಗ್ರೇಸ್ ತ್ಯೇಜುಸುತ್ತಿದ್ದೆನೆ ಎಂದ ಶಂಕರ್, ನನಗೆ ಹಣ ಮುಖ್ಯ ಅಲ್ಲ. ನನ್ನ ಬಳಿ ಎಲ್ಲವೊ ಇದೆ. ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಸಮಾವೇಶದಲ್ಲಿ ಇಷ್ಟು ಜನ ಸೇರಿದ್ದಾರೆ ಅಂದ್ರೆ ನನ್ನ ಮೇಲಿನ ಪ್ರೀತಿ ತೊರಿಸುತ್ತದೆ. ಕೆಲವರು ಅಧಿಕಾರದ ದರ್ಪದಲ್ಲಿ ಎಲ್ಲವನ್ನೂ ಗೆಲ್ಲೊಕೆ ಆಗುತ್ತೆ ಎಂದುಕೊಂಡಿದ್ದಾರೆ.
ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ತಿಳಿಸೊಕೆ ಬಯಸುತ್ತೆನೆ ಎಂದು ಸಚಿವ ಮಹದೇವಪ್ಪ ವಿರುದ್ಧ ಕಿಡಿಕಾರಿದರು. ನನಗೊ ಈ ಕ್ಷೇತ್ರದ ಚಿತ್ರಣ ಬದಲು ಮಾಡಬೇಕೆಂಬ ಆಸೆ ಇದೆ. ನಿವೇಲ್ಲರೊ ಒಗ್ಗಟ್ಟಾಗಿ ತಮಗೆ ಆಶಿರ್ವಾದ ಮಾಡಿ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.