ಹೆಚ್'ಡಿಕೆಗೆ ಮತ್ತೆ ಸಂಕಷ್ಟ: ಭೂ ಹಗರಣದ ಮರು ವಿಚಾರಣೆಗೆ ಸುಪ್ರೀಂ ಆದೇಶ

By Internet DeskFirst Published Sep 27, 2016, 8:13 AM IST
Highlights

ನವದೆಹಲಿ(ಸೆ. 27): ಮಾಜಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಶ್ವ ಭಾರತಿ ಹೌಸಿಂಗ್ ಸೊಸೈಟಿ, ಜಂತಕಲ್‌ ಮೈನಿಂಗ್‌ ಗುತ್ತಿಗೆ ಪ್ರಕರಣದ ಮರು ವಿಚಾರಣೆಗೆ  ಸುಪ್ರಿಂಕೋರ್ಟ್ ಆದೇಶ ನೀಡಿದೆ. ಜೊತೆಗೆ ಕ್ರಿಮಿನಲ್​ ವಿಚಾರಣೆ ಎದುರಿಸುವಂತೆಯೂ ಮಾಜಿ ಸಿಎಂಗೆ ತಾಕೀತು ಮಾಡಿದೆ.  ಎಚ್​ಡಿಕೆ ದಂಪತಿ ವಿರುದ್ಧದ ಈ ಪ್ರಕರಣವನ್ನ ಹೈಕೋರ್ಟ್ ಈ ಹಿಂದೆ ರದ್ದುಪಡಿಸಿತ್ತು. ಕೆಳ ನ್ಯಾಯಾಲಯದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದ್ದು, ಖದ್ದು ಹಾಜರಾಗುವಂತೆ ಹೆಚ್'ಡಿಕೆ ದಂಪತಿಗೆ ಸೂಚಿಸಿದೆ.

click me!