
ಬೆಂಗಳೂರು (ಡಿ.08): ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ರವಿ ಬೆಳೆಗೆರೆ ಸುಪಾರಿ ಕೊಟ್ಟಿರುವ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಈ ಬಗ್ಗೆ ಸುವರ್ಣ ನ್ಯೂಸ್'ಗೆ ಪ್ರತಿಕ್ರಿಯಿಸಿರುವ ಸುನೀಲ್ ಹೆಗ್ಗರವಳ್ಳಿ, ಈ ವಿಷಯ ಕೇಳಿ ನನಗೂ ಶಾಕ್ ಆಗಿದೆ. ಯಾಕೆ ಈ ರೀತಿಯ ಭಾವನೆ ಬಂತು ಗೊತ್ತಿಲ್ಲ. ಕೊಲೆ ಮಾಡಲು ಸುಪಾರಿ ಕೊಡುತ್ತಾರೆ ಎಂದು ಊಹಿಸಿರಲಿಲ್ಲ. ಹಿರಿಯ ಅಧಿಕಾರಿಗಳು ಕರೆಸಿ ವಿಷಯ ತಿಳಿಸಿದರು ಎಂದು ಹೇಳಿದ್ದಾರೆ.
ನೀನು ಒಳ್ಳೆಯ ಬರಹಗಾರ. ನಿನ್ನಂತವರು ನನಗೆ ಬೇಕು ಎಂದು ಮೂರು ವರ್ಷಗಳ ಹಿಂದೆ ಆಫೀಸ್ಗೆ ಹೋದಾಗ ಹೇಳಿದ್ದರು. ಪತ್ರಿಕೆ ನಡೆಸುವವರು ಇಲ್ಲ, ನಿನ್ನಂತವರು ನನಗೆ ಬೇಕು ಎಂದು ಕರೆಯುತ್ತಿದ್ದರು. ನಾನು ಹಾಯ್ ಬೆಂಗಳೂರು ಪತ್ರಿಕೆ ಬಿಟ್ಟಾಗ ಮತ್ತೆ ಕರೆದಿದ್ದರು. ಇದರಿಂದ ಹೋಗಬೇಕೆಂದು ನಿರ್ಧಾರ ಮಾಡಿ ಮತ್ತೆ ಹೋದೆ ಆದರೆ ಅಲ್ಲಿ ಯಾರು ಇರಲಿಲ್ಲ ಎಂದು ಸುನೀಲ್ ಹೆಗ್ಗರವಳ್ಳಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.