
ಹುಬ್ಬಳ್ಳಿ(ಮಾ.23): ದೇವದಾಸಿಯರಿಗೆ ಸಹಾಯ ಮಾಡಲು ಹೋದಾಗ ಅನುಭವಿಸಿದ ಯಾತನೆ ನನ್ನ ಜೀವನದಲ್ಲೇ ಎದುರಾದ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು ಎಂದು ಇಸ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ತಿಳಿಸಿದರು.
ನಗರದ ಬಿವಿಬಿ ಕಾಲೇಜಿನಲ್ಲಿ ನಡೆದ ‘ಹೌ ಟು ಬೀಟ್ ಬಾಯ್ಸ್’ ಎಂಬ ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಅವರು, ದೇವದಾಸಿಯರನ್ನು ಪುನಃಶ್ಚೇತನ ಕೇಂದ್ರಕ್ಕೆ ಕರೆತಂದು ಅವರ ಜೀವನ ಬದಲಾಯಿಸಲು ಹೋದಾಗ, ಮೊದಲು ಅವರು ನನಗೆ ಚಪ್ಪಲಿಯಿಂದ ಹೊಡೆದಿದ್ದರು. ಎರಡನೇ ಬಾರಿ ಹೋದಾಗ ಟೊಮೆಟೋದಲ್ಲಿ ಹೊಡೆದಿದ್ದರು. ದೇವದಾಸಿಯರಲ್ಲಿ ನೂರು ಮಂದಿಯನ್ನು ಪರಿವರ್ತಿಸಲು ಹೋದರೆ ಮೂವರನ್ನು ಮಾತ್ರ ಪರಿವರ್ತಿಸಲು ಸಾಧ್ಯ. ಅಂತಹದ್ದರಲ್ಲಿ ಕಳೆದ 18 ವರ್ಷಗಳಲ್ಲಿ 3000 ದೇವದಾಸಿಯರ ಮನ ಪರಿವರ್ತನೆ ಮಾಡಿದ್ದೇವೆ ಎಂದರು.
ಇಸ್ಫೋಸಿಸ್ ಸಂಸ್ಥೆಯ ಆದಾಯ ಹೆಚ್ಚಳ, ಲಾಭಾಂಶ ದುಪ್ಪಟ್ಟು ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನನ್ನ ಮಕ್ಕಳು ಹಣ ಕೇಳಿದಾಗ, ಇಲ್ಲ ಎಂದು ಹೇಳಲು ಸಾಧ್ಯವಿರಲಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಹಣ ನೀಡುವುದು ನನಗೆ ಇಷ್ಟವಿರಲಿಲ್ಲ. ಜೀವನದಲ್ಲಿ ಇದಕ್ಕಿಂತ ಕಠಿಣ ಸಮಸ್ಯೆಗಳನ್ನು ನಾನು ಎದುರಿಸಿಯೇ ಇಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.