
ತುಮಕೂರು(ಜೂನ್ 20): ಬಣ್ಣದ ಲೋಕಕ್ಕೆ ಮಾರುಹೋಗುತ್ತಿರುವ ಯುವತಿಯರೇ ನೀವು ಈ ಸ್ಟೋರಿ ನೋಡಲೇಬೇಕು. ತುಮಕೂರಿನ ಕಿಚ್ಚ ಸುದೀಪ್ ಅಭಿಮಾನಿ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಕಾಮುಕ ಪುನಿತ್ ರಾಯ್'ನ ಈ ಕಥೆ ಕೇಳಿದರೆ ರಾಜ್ಯದ ಹೆಣ್ಣು ಮಕ್ಕಳ ರಕ್ತ ಕುದಿಯುತ್ತೆ. ಈತನ ಕಾಮದ ಬಿಸಿಗೆ ಬಲಿಯಾದ ತುಮಕೂರಿನ ಯುವತಿಯರ ಲಿಸ್ಟ್ ಕೇಳಿದರೆ ನೀವು ಬೆಚ್ಚಿ ಬೀಳ್ತೀರಿ.. ರಾಮನಗರ ಜಿಲ್ಲೆಯ ಮಾಗಡಿಯ ಹುಡುಗಿಯೊಬ್ಬಳು ಪುನೀತ್ ಆರ್ಯನಿಂದ ವಂಚನೆಗೆ ಒಳಗಾದ ಪ್ರಕರಣ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಗಡಿಯ ಯುವತಿಯನ್ನು ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವ ಪ್ರಲೋಬನೆಯೊಡ್ಡಿ ಪುನೀತ್ ರಾಯ್ ದೈಹಿಕ ಸಂಬಂಧ ಬೆಳೆಸಿದ್ದಾನೆ. ಹಲವು ಬಾರಿ ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡಿದ್ದಾನೆ. ಯುವತಿ ಗರ್ಭವತಿಯಾದಾಗ ಕೈಬಿಟ್ಟಿದ್ದಾನೆ. ಯುವತಿಯು ಪ್ರಕರಣ ದಾಖಲಿಸಿದಾಗ 1 ಲಕ್ಷ ರೂ ಪರಿಹಾರ ಕೊಡುವುದಾಗಿ ಸುಳ್ಳು ಭರವಸೆ ನೀಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಮೋಸಕ್ಕೊಳಗಾದ ಯುವತಿಯು ಇದೀಗ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾಳೆ.
ಸುದೀಪ್'ನ ದೊಡ್ಡ ಫ್ಯಾನ್ ಎಂದು ಹೇಳಿಕೊಳ್ಳುವ ಪುನೀತ್ ರಾಯ್'ನ ಕಾಮಪುರಾಣ ತೋರಿಸುವ ಇನ್ನೂ ಹಲವು ಪ್ರಕರಣಗಳಿವೆಯಂತೆ. ತುಮಕೂರಿನ ಅನೇಕ ಹುಡುಗಿಯರಿಗೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆನ್ನುವ ಆರೋಪವಿದೆ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಹುಡುಗಿಯರನ್ನು ಸೆಳೆದು, ಸೆಕ್ಸ್ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್'ಮೇಲ್ ಮಾಡಿ ಲೈಂಗಿಕ ಹಲ್ಲೆ ನಡೆಸುತ್ತಾನೆನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.