ಕಗ್ಗಲಿಪುರದ ಕತ್ತಲಲ್ಲಿ, ಸಬ್ ಇನ್ಸ್ಪೆಕ್ಟರ್ ಪೌರುಷ: ಗೆಳೆಯರ ಜೊತೆ ಮಾತನಾಡುತ್ತಿದ್ದವರಿಗೆ ಬಿತ್ತು ಹೊಡೆತ

Published : Sep 08, 2016, 01:30 PM ISTUpdated : Apr 11, 2018, 01:02 PM IST
ಕಗ್ಗಲಿಪುರದ ಕತ್ತಲಲ್ಲಿ, ಸಬ್ ಇನ್ಸ್ಪೆಕ್ಟರ್ ಪೌರುಷ: ಗೆಳೆಯರ ಜೊತೆ ಮಾತನಾಡುತ್ತಿದ್ದವರಿಗೆ ಬಿತ್ತು ಹೊಡೆತ

ಸಾರಾಂಶ

ಬೆಂಗಳೂರು(ಸೆ.10): ರಾಜ್ಯದಲ್ಲಿ  ಪೊಲೀಸರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಸಾರ್ವಜನಿಕರ ಮೇಲೆ ಪೊಲೀಸರ ದಬ್ಬಾಳಿಕೆಗಳು ಹೆಚ್ಚಾಗತೊಡಗಿವೆ. ಕಗ್ಗಲಿಪುರದ ಸಬ್​ ಇನ್ಸ್​ಪೆಕ್ಟರ್​ವೊಬ್ಬ ವ್ಯಕ್ತಿಯೊಬ್ಬನ ಮೇಲೆ ಮನಸೋ ಇಚ್ಚೆ ಥಳಿಸಿದ್ದಾನೆ.

ಕಗ್ಗಲಿಪುರದ ಸಬ್​ ಇನ್​​​ಪೆಕ್ಟರ್​ ಸುನೀಲ್​, ಪ್ರಗತಿ ಟೆಂಟ್​ ಹೌಸ್​ ನಡೆಸುತ್ತಿದ್ದ ಚೆಲುವಯ್ಯ ಎಂಬಾತನ ಮೇಲೆಮನಸೋ ಇಚ್ಚೆ ಥಳಿಸಿದ್ದಾನೆ. ಕಳೆದ ಭಾನುವಾರ ರಾತ್ರಿ ಟೆಂಟ್​ ಹೌಸ್​ ಮುಂದೆ ವ್ಯಕ್ತಿಯೊಬ್ಬನ ಜೊತೆ ಮಾತನಾಡುತ ನಿಂತಿದ್ದ  ಚೆಲುವಯ್ಯನ ಮೇಲೆ, ಜೀಪಿನಲ್ಲಿ  ಬಂದ ಸಬ್​ ಇನ್ಸ್ ಪೆಕ್ಟರ್​ ಏಕಾ ಏಕಿ ಥಳಿಸಿದ್ದಾರೆ. ಕೇಳಿದರೆ ಕುಡಿದು ಗಲಾಟೆ ಮಾಡ್ತಿದ್ದೀರಾ ಎಂಬ ಉತ್ತರ ಕೊಟ್ಟ ಸಬ್​ ಇನ್ಸ್​ಪೆಕ್ಟರ್​​, ಚೆಲುವಯ್ಯನಿಗೆ ಹೊಡೆಯಬಾರದ ಜಾಗಕ್ಕೆಲ್ಲಾ ಹೊಡೆದಿದ್ದಾನೆ. ಪರಿ ಪರಿ ಬೇಡಿಕೊಂಡರೂ ಬಿಡದ ಸಬ್​ ಇನ್ಸ್​ಪೆಕ್ಟರ್ ರೌದ್ರಾವತಾರ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು