ಪ್ರಿಯಕರನ ಅಂತ್ಯಸಂಸ್ಕಾರಕ್ಕೆ ಹೋಗಲು ರಜೆ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

By Suvarna Web DeskFirst Published Feb 9, 2017, 9:42 AM IST
Highlights

ಪ್ರಿಯಕರನ ಅಂತ್ಯಸಂಸ್ಕಾರಕ್ಕೆ ಹೋಗಲು ರಜೆ ಸಿಗದಿದ್ದಕ್ಕೆ ನೊಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ(ಫೆ.09): ಪ್ರಿಯಕರನ ಅಂತ್ಯಸಂಸ್ಕಾರಕ್ಕೆ ಹೋಗಲು ರಜೆ ಸಿಗದಿದ್ದಕ್ಕೆ ನೊಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಪಶ್ಚಿಮಬಂಗಾಳ ಮೂಲಕ ದೀಪಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೆಜಿಎಫ್ ನ ಆಂಡರ್ ಸನ್ ಪೇಟೆಯ ನೂರಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದೀಪಾ ರಾತ್ರಿ ಮಲಗುವ ಕೋಣೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಪಶ್ಚಿಮ ಬಂಗಾಳದಲ್ಲಿರುವ ತನ್ನ ಪ್ರಿಯಕರ ಸಾವನ್ನಪ್ಪಿರುವ ಬಗ್ಗೆ ದೀಪಾಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆತನ ಅಂತ್ಯಸಂಸ್ಕಾರಕ್ಕೆ ಹೋಗಲು ನಿರ್ಧರಿಸಿದ್ದ ದೀಪಾ, ಕಾಲೇಜಿನಲ್ಲಿ ರಜೆ ಕೇಳಿದ್ದಳು.

Latest Videos

ಆದರೆ ದೀಪಾಗೆ ರಜೆ ನೀಡದಿರುವಂತೆ ದೀಪಾ ಮನೆಯವರು ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಪೋಷಕರ ಮನವಿಯಂತೆ ದೀಪಾಗೆ ರಜೆ ತೆಗೆದುಕೊಳ್ಳಲು ಕಾಲೇಜಿನಲ್ಲಿ ಅನುಮತಿ ನೀಡಿರಲಿಲ್ಲ. ಇದರಿಂದ ಹತಾಶೆಗೊಂಡಿದ್ದ ದೀಪಾ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ಆಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!