4 ದಿನಗಳ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಗಾಂಧಿ ಬಜಾರ್'ನಲ್ಲಿ ಸ್ಕೆಚ್ ಹಾಕಲಾಗಿತ್ತಾ?

Published : Sep 06, 2017, 12:35 AM ISTUpdated : Apr 11, 2018, 01:12 PM IST
4 ದಿನಗಳ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಗಾಂಧಿ ಬಜಾರ್'ನಲ್ಲಿ ಸ್ಕೆಚ್ ಹಾಕಲಾಗಿತ್ತಾ?

ಸಾರಾಂಶ

ಗೌರಿ ಲಂಕೇಶ್ ಅವರ ಹತ್ಯೆಗೆ ಶನಿವಾರವೇ ಸ್ಕೆಚ್ ಆಗಿರುವ ಸಾಧ್ಯತೆ ಇದೆ. ಶನಿವಾರದಂದು ಗಾಂಧಿ ಬಜಾರ್'ನಲ್ಲಿ ಗೌರಿ ಲಂಕೇಶ್ ಅವರನ್ನು ಯಾರೋ ಅಪರಿಚಿತರು ಹಿಂಬಾಲಿಸುತ್ತಿದ್ದರಂತೆ. ಹಾಗಂತ, ಗೌರಿ ಲಂಕೇಶ್ ಅವರು ತಮ್ಮ ತಾಯಿಯವರಿಗೆ ಹೇಳಿದ್ದರು. ಉತ್ತರಹಳ್ಳಿಯಲ್ಲಿಯಲ್ಲಿರುವ ತಮ್ಮ ತಾಯಿ ಮನೆಗೆ ಹೋದಾಗ ಗೌರಿ ಲಂಕೇಶ್ ಈ ವಿಚಾರವನ್ನು ತಿಳಿಸಿದ್ದರು. ಹಾಗಂತ, ಅವರ ತಾಯಿಯವರೇ ಪೊಲೀಸರಿಗೆ ಇದೀಗ ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಸೆ. 06): ಗೌರಿ ಲಂಕೇಶ್ ಹತ್ಯೆ ಬಹಳ ಪೂರ್ವನಿಯೋಜಿತವಾಗಿ ನಡೆದಿರುವುದು ಸ್ಪಷ್ಟ. ಸಾಕಷ್ಟು ಮೊದಲೇ ಈಕೆಯ ಹತ್ಯೆಗೆ ಯೋಜನೆ ರೂಪಿಸಿರುವ ಸಾಧ್ಯತೆಯೇ ಹೆಚ್ಚು. ಗೌರಿ ಲಂಕೇಶ್ ಅವರ ತಾಯಿ ಪೊಲೀಸರಿಗೆ ನೀಡಿರುವ ಮಾಹಿತಿಯಿಂದ ಇದು ಇನ್ನಷ್ಟು ವೇದ್ಯವಾಗಿದೆ. ಗೌರಿ ಲಂಕೇಶ್ ಅವರ ಹತ್ಯೆಗೆ ಶನಿವಾರವೇ ಸ್ಕೆಚ್ ಆಗಿರುವ ಸಾಧ್ಯತೆ ಇದೆ. ಶನಿವಾರದಂದು ಗಾಂಧಿ ಬಜಾರ್'ನಲ್ಲಿ ಗೌರಿ ಲಂಕೇಶ್ ಅವರನ್ನು ಯಾರೋ ಅಪರಿಚಿತರು ಹಿಂಬಾಲಿಸುತ್ತಿದ್ದರಂತೆ. ಹಾಗಂತ, ಗೌರಿ ಲಂಕೇಶ್ ಅವರು ತಮ್ಮ ತಾಯಿಯವರಿಗೆ ಹೇಳಿದ್ದರು. ಉತ್ತರಹಳ್ಳಿಯಲ್ಲಿಯಲ್ಲಿರುವ ತಮ್ಮ ತಾಯಿ ಮನೆಗೆ ಹೋದಾಗ ಗೌರಿ ಲಂಕೇಶ್ ಈ ವಿಚಾರವನ್ನು ತಿಳಿಸಿದ್ದರು. ಹಾಗಂತ, ಅವರ ತಾಯಿಯವರೇ ಪೊಲೀಸರಿಗೆ ಇದೀಗ ಮಾಹಿತಿ ನೀಡಿದ್ದಾರೆ.

ಮೂರು ತಿಂಗಳ ಹಿಂದೆಯೇ ಗೌರಿ ಲಂಕೇಶ್ ಅವರು ತಮಗೆ ಜೀವ ಬೆದರಿಕೆ ಇರುವ ವಿಚಾರವನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಅವರ ಬಳಿ ಹೇಳಿಕೊಂಡಿದ್ದರು. ಯಾರೋ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ, ತನ್ನನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕಿದನೆಂದು ಗೌರಿ ಲಂಕೇಶ್ ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ಮನೆ, 3 ಆಟೋ, ಒಂದು ಕಾರು ಜೊತೆಗೆ ಡ್ರೈವರ್, ಈತ ಭಾರತದ ಕೋಟ್ಯಾಧಿಪತಿ ಭಿಕ್ಷುಕ
ಗಿಲ್ಲಿ ನಟ ರಾಜಕೀಯ ಎಂಟ್ರಿ: ವೋಟು ಕೇಳಿದ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ, ವಿಶ್ ಮಾಡಿದ ಕುಮಾರಸ್ವಾಮಿ!