ಬಂಡವಾಳ ಹೂಡಿಕೆಗೆ ರಾಜ್ಯ ದೇಶದಲ್ಲೇ ನಂ.1

Published : Sep 16, 2017, 05:47 PM ISTUpdated : Apr 11, 2018, 12:43 PM IST
ಬಂಡವಾಳ ಹೂಡಿಕೆಗೆ ರಾಜ್ಯ ದೇಶದಲ್ಲೇ ನಂ.1

ಸಾರಾಂಶ

ಹೊಸದಾಗಿ ಬಂಡವಾಳ ಹೂಡಿಕೆ ಯೋಜನೆಗಳನ್ನು ಆಕರ್ಷಿಸುವ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ಆರ್‌ಬಿಐ ಕೆಲವೇ ಮಾನದಂಡ ಆಧರಿಸಿ ಅಧ್ಯಯನ ನಡೆಸಿರುವ ಪರಿಣಾಮ ಕರ್ನಾಟಕಕ್ಕೆ 5ನೇ ಸ್ಥಾನ ನೀಡಿದೆ. ಇದು ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂದು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರು: ಹೊಸದಾಗಿ ಬಂಡವಾಳ ಹೂಡಿಕೆ ಯೋಜನೆಗಳನ್ನು ಆಕರ್ಷಿಸುವ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ಆರ್‌ಬಿಐ ಕೆಲವೇ ಮಾನದಂಡ ಆಧರಿಸಿ ಅಧ್ಯಯನ ನಡೆಸಿರುವ ಪರಿಣಾಮ ಕರ್ನಾಟಕಕ್ಕೆ 5ನೇ ಸ್ಥಾನ ನೀಡಿದೆ. ಇದು ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂದು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯವು ಒಟ್ಟಾರೆ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳ ಆಕರ್ಷಣೆಯಲ್ಲಿ ಎರಡು ವರ್ಷದಿಂದಲೂ ಸತತವಾಗಿ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಆದರೆ ಆರ್‌ಬಿಐ ವರದಿ ಸಿದ್ಧಪಡಿಸುವಾಗ ಕೈಗಾರಿಕಾ ವಲಯದ ಪ್ರಗತಿಯ ಸಮಗ್ರ ಬೆಳವಣಿಗೆಯನ್ನು ಪರಿಗಣಿಸದೆ ಕೇವಲ ಕೆಲವೇ ಮಾನದಂಡ ಆಧರಿಸಿ ವರದಿ ನೀಡಿದೆ.

ಇದರಿಂದ ರಾಜ್ಯದ ಸಾಧನೆ ಬಗ್ಗೆ ಗೊಂದಲ ಉಂಟಾಗಿದೆ. ಆರ್‌ಬಿಐಯು ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಮೇಲಿನ ಅಂಶಗಳ ಆಧಾರದ ಮೇಲೆ ಕರ್ನಾಟಕ ರಾಜ್ಯವು 2015-16ರ ಸಾಲಿನಲ್ಲಿ ಶೇ. 6.2ರಷ್ಟು ಬಂಡವಾಳ ಹೂಡಿಕೆ ಆಕರ್ಷಿಸಿದ್ದು, 2016-17ರ ಸಾಲಿನಲ್ಲಿ ಇದು ಶೇಕಡ 6.6ರಷ್ಟು ಪ್ರಗತಿ ಕಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಕೇಂದ್ರ ಸರ್ಕಾರದ ಡಿಪಾರ್ಟ್‌ಮೆಂಟ್ ಆಫ್ ಪಾಲಿಸಿ ಅಂಡ್ ಪ್ರಮೋಷನ್ಸ್ ಸಚಿವಾಲಯ ಪ್ರಕಟಿಸಿರುವ ವರದಿ ಪ್ರಕಾರ ಕೈಗಾರಿಕೆ ಉದ್ದೇಶದಿಂದ ಹೂಡಿಕೆಯಾದ ಬಂಡವಾಳದಲ್ಲಿ ರಾಜ್ಯ ಮೊದಲ ಸ್ಥಾನ ಪಡೆದಿದೆ. 2017ರಲ್ಲೂ ಇದೇ ಸ್ಥಾನ ಮುಂದುವರೆಸಿ ಕೊಂಡಿದ್ದು ವಿವರಗಳನ್ನು dipp.gov.in ವೆಬ್ಸೈಟ್‌ನಲ್ಲಿ ವೀಕ್ಷಿಸಬಹುದು ಎಂದು ಕೈಗಾರಿಕಾಭಿವೃದ್ಧಿ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2016-17ರ ಪ್ರಗತಿ ಬಗ್ಗೆ ಆರ್‌ಬಿಐಯು ವರದಿ ಸಿದ್ಧಪಡಿಸುವಾಗ ಕಾರ್ಪೊರೇಟ್ ಕ್ಷೇತ್ರಗಳ್ನು ಮಾತ್ರ ಪರಿಗಣಿಸಿದೆ. ಹೀಗಾಗಿ ಯೋಜನೆಗಳ ಬಂಡವಾಳ ಹೂಡಿಕೆಯು 10 ಕೋಟಿ ಮೇಲ್ಪಟ್ಟು ಇರುವ ಪ್ರಸ್ತಾವನೆಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. ಜತೆಗೆ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಯೋಜನೆಗಳ ಪ್ರಸ್ತಾವನೆಗಳನ್ನು ಮಾತ್ರ ವರದಿಯಲ್ಲಿ ಪ್ರಕಟಿಸಿದೆ. ಆದರೆ ಕರ್ನಾಟಕದಲ್ಲಿ ಸ್ವಂತ ಬಂಡವಾಳ ಹೂಡಿಕೆ ಮತ್ತು ಪಾಲುಗಾರಿಕೆ ಸಂಸ್ಥೆಗಳ ಮೂಲಕ ಬಂಡವಾಳ ಹೂಡಿಕೆ ಯೋಜನೆಗಳು ಸಾಕಷ್ಟು ಇವೆ. ಅವುಗಳನ್ನು ಆರ್‌ಬಿಐ ತನ್ನ ವರದಿಯಲ್ಲಿ ಪರಿಗಣಿಸಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ