ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ: ರಾಜ್ಯ ನಾಯಕರು ಹೇಳಿದ್ದೇನು..?

Published : Nov 09, 2016, 08:54 PM ISTUpdated : Apr 11, 2018, 01:00 PM IST
ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ: ರಾಜ್ಯ ನಾಯಕರು ಹೇಳಿದ್ದೇನು..?

ಸಾರಾಂಶ

ಇದು ಟಿಪ್ಪು ಬಗ್ಗೆ ಅವರಿಗೆ ಮನಸ್ಸಲ್ಲಿ ಏನಿದೆ ಅಂತಾ ಗೊತ್ತಾಗುತ್ತದೆ. ಅಂದು ಬಿಜೆಪಿ ಸಚಿವರು ನೋಡಿದಾಗ ರಾಜೀನಾಮೆ ಕೊಡಿಸಿದ್ದರು. ಈಗ ಇವರು ರಾಜೀನಾಮೆ ಕೊಡ್ತಾರಾ ನೋಡಬೇಕು. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ಟಿಪ್ಪು ಬಗ್ಗೆ ನಿಜವಾದ ಕಾಳಜಿ ಬಯಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು(ನ.10): ಟಿಪ್ಪು ಜಯಂತಿ ಆಚರಣೆ ವೇಳೆ ಸಚಿವ ತಬ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಣೆ ಕುರಿತಂತೆ ರಾಜ್ಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ಧಾರೆ.   ತನ್ವೀರ್ ಸೇಠ್ ರಾಜೀನಾಮೆ ಕೊಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿದೆ.

ಯಡಿಯೂರಪ್ಪ: ಯಾರೇ ತಪ್ಪು ಮಾಡಿದ್ರೂ ಕ್ರಮಕೈಗೊಳ್ಳಬೇಕು, ತನ್ವೀರ್​ ಸೇಠ್​ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಬೇಕು 

ಜಗದೀಶ್ ಶೆಟ್ಟರ್: ನಾಳೆ ಸಚಿವ ತನ್ವೀರ್​​ ಸೇಠ್​​ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ನಾಳೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ.  

ಬಸವರಾಜ ಹೊರಟ್ಟಿ: ಸಚಿವ ತನ್ವೀರ್​ ಸೇಠ್ ರಾಜೀನಾಮೆ ಕೊಡಬೇಕು. ತನ್ವೀರ್​ ಸೇಠ್​ ರಾಜೀನಾಮೆ ಸಿಎಂ ಪಡೆಯಬೇಕು 

ಎಚ್​.ಡಿ.ಕುಮಾರಸ್ವಾಮಿ: ಇದು ಟಿಪ್ಪು ಬಗ್ಗೆ ಅವರಿಗೆ ಮನಸ್ಸಲ್ಲಿ ಏನಿದೆ ಅಂತಾ ಗೊತ್ತಾಗುತ್ತದೆ. ಅಂದು ಬಿಜೆಪಿ ಸಚಿವರು ನೋಡಿದಾಗ ರಾಜೀನಾಮೆ ಕೊಡಿಸಿದ್ದರು. ಈಗ ಇವರು ರಾಜೀನಾಮೆ ಕೊಡ್ತಾರಾ ನೋಡಬೇಕು. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ಟಿಪ್ಪು ಬಗ್ಗೆ ನಿಜವಾದ ಕಾಳಜಿ ಬಯಲಾಗಿದೆ.

ಈಶ್ವರಪ್ಪ: ಸರ್ಕಾರಿ ಕಾರ್ಯಕ್ರಮದಲ್ಲಿ ಇಂತಹ ಕೆಲಸ ಮಾಡಿರುವುದು ಕಾನೂನಿನ ಉಲ್ಲಂಘನೆ, ಕೂಡಲೇ ರಾಜೀನಾಮೆ ಕೊಡಬೇಕು

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!