ಗಂಗಾಸಾಗರ್ ಮೇಳದಲ್ಲಿ ಕಾಲ್ತುಳಿತ ದುರಂತ; 6ಕ್ಕೂ ಹೆಚ್ಚು ಸಾವು

Published : Jan 15, 2017, 04:14 PM ISTUpdated : Apr 11, 2018, 12:53 PM IST
ಗಂಗಾಸಾಗರ್ ಮೇಳದಲ್ಲಿ ಕಾಲ್ತುಳಿತ ದುರಂತ; 6ಕ್ಕೂ ಹೆಚ್ಚು ಸಾವು

ಸಾರಾಂಶ

ಪಶ್ಚಿಮ ಬಂಗಾಳ ಸರಕಾರವು 9 ಸಾವಿರ ಪೊಲೀಸರನ್ನು ರಕ್ಷಣೆಗೆ ನಿಯೋಜಿಸಿತ್ತು. 165 ಸಿಸಿಟಿವಿಗಳನ್ನು ಸ್ಥಾಪಿಸಲಾಗಿತ್ತು. 20 ಹಡಗುಗಳು ಮತ್ತು ಒಂದು ಡ್ರೋನ್ ಅನ್ನೂ ಭದ್ರತೆಗೆ ಬಳಸಲಾಗಿತ್ತು. ಆದರೂ ಕಾಲ್ತುಳಿತದ ದುರ್ಘಟನೆ ತಡೆಯಲು ಸಾಧ್ಯವಾಗಲಿಲ್ಲ.

ಕೋಲ್ಕತಾ(ಜ. 15): ಮಕರ ಸಂಕ್ರಾಂತಿಯ ಅಂಗವಾಗಿ ನಡೆದ ಗಂಗಾಸಾಗರ್ ಮೇಳದಲ್ಲಿ ಕಾಲ್ತುಳಿತದ ದುರಂತ ಸಂಭವಿಸಿದ್ದು, 6ಕ್ಕೂ ಹೆಚ್ಚು ಜನರ ದುರ್ಮರಣವಾಗಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಸೌಥ್24 ಪರ್ಗಾಣದ ಕಚುಬೇರಿಯಾ ಎಂಬ ಪ್ರದೇಶದಲ್ಲಿ ಜನರು ದೋಣಿಯನ್ನು ಏರುವಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಎಎನ್'ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರೀ ಸಂಖ್ಯೆಯಲ್ಲಿ ಭಕ್ತಸಮೂಹ ನೆರೆಯುವುದರಿಂದ ಪಶ್ಚಿಮ ಬಂಗಾಳ ಸರಕಾರವು 9 ಸಾವಿರ ಪೊಲೀಸರನ್ನು ರಕ್ಷಣೆಗೆ ನಿಯೋಜಿಸಿತ್ತು. 165 ಸಿಸಿಟಿವಿಗಳನ್ನು ಸ್ಥಾಪಿಸಲಾಗಿತ್ತು. 20 ಹಡಗುಗಳು ಮತ್ತು ಒಂದು ಡ್ರೋನ್ ಅನ್ನೂ ಭದ್ರತೆಗೆ ಬಳಸಲಾಗಿತ್ತು. ಆದರೂ ಕಾಲ್ತುಳಿತದ ದುರ್ಘಟನೆ ತಡೆಯಲು ಸಾಧ್ಯವಾಗಲಿಲ್ಲ.

ಮಕರ ಸಂಕ್ರಾಂತಿ ಇದ್ದ ಶನಿವಾರದಂದು 16 ಲಕ್ಷ ಭಕ್ತಾದಿಗಳು ಇದೇ ಗಂಗಾಸಾಗರ್'ನಲ್ಲಿ ಮಿಂದು ಕಪಿಲ ಮುನಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದರು. ಈ ಬಾರಿಯ ಗಂಗಾ ಸಾಗರ್ ಮೇಳದ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಇದರ ಭಾಗವಾಗಿ 10 ಸಾವಿರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಗಂಗೆ ಮಲಿನವಾಗುವುದನ್ನು ತಡೆಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ ಇಂಡಿಯಾ ನೇಮಕಾತಿ: 154 ಹುದ್ದೆಗಳಿಗೆ ಅರ್ಜಿ ಆಹ್ವಾನ, ತಕ್ಷಣವೇ ಅರ್ಜಿ ಸಲ್ಲಿಸಿ
Viral Video: ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್‌ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌