
ನೆಲ್ಲೋರ್[ಮೇ.23]: ಇತ್ತೀಚೆಗೆ ಶ್ರೀಲಂಕಾದ ಹೋಟೆಲ್ ಮತ್ತು ಚಚ್ರ್ಗಳ ಮೇಲೆ ದಾಳಿ ನಡೆಸಿ 250ಕ್ಕೂ ಹೆಚ್ಚು ಅಮಾಯಕರನ್ನ ಬಲಿ ಪಡೆದ ಐಸಿಸ್ ಉಗ್ರರು, ಇದೀಗ ಭಾರತದೊಳಕ್ಕೂ ನುಸುಳಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. 3 ದಿನಗಳ ಹಿಂದೆ ಆಂಧ್ರದ ಪೊನ್ನಪುಡಿ ಪಥುರು ಗ್ರಾಮಕ್ಕೆ ಹೊಂದಿಕೊಂಡ ಸಮುದ್ರ ತೀರದಲ್ಲಿ ಬೋಟ್ ಒಂದು ಪತ್ತೆಯಾಗಿತ್ತು. ತಪಾಸಣೆ ವೇಳೆ ಬೋಟ್ ಶ್ರೀಲಂಕಾಕ್ಕೆ ಸೇರಿದ್ದು ಎಂಬುದು ಖಚಿತಪಟ್ಟಿದೆ.
ಇತ್ತೀಚೆಗೆ ಲಂಕಾದಲ್ಲಿ ದಾಳಿ ನಡೆಸಿದ ಉಗ್ರರು, ಸಮುದ್ರ ಮಾರ್ಗವಾಗಿ ಭಾರತ ಪ್ರವೇಶಿಸಬಹುದು ಎಂದು ಲಂಕಾ ಗುಪ್ತಚರ ಇಲಾಖೆ ಇತ್ತೀಚೆಗೆ ಮುನ್ನೆಚ್ಚರಿಕೆ ನೀಡಿತ್ತು. ಹೀಗಾಗಿ ಶಂಕಾಸ್ಪದ ಬೋಟ್ ಪತ್ತೆಯಾಗಿರುವುದು ನಾನಾ ವದಂತಿ, ಆತಂಕಕ್ಕೆ ಕಾರಣವಾಗಿದೆ. ಪತ್ತೆಯಾದ ಬೊಟ್ನಲ್ಲಿ ಸಿಗರೆಟ್, ಬೀಡಿ, ಕುಡಿಯುವ ನೀರಿನ ಬಾಟಲ್ ಪತ್ತೆಯಾಗಿದೆ. ಕ್ಯಾನ್ ಮೇಲಿನ ಸ್ಟಿಕ್ಕರ್ನಿಂದ ಈ ಹಡಗಿನಲ್ಲಿ ಬಂದವರು ಲಂಕಾದವರೇ ಎಂದು ಖಚಿತಪಡಿಸಿದೆ.
ಈ ಹಿನ್ನೆಲೆಯಲ್ಲಿ ಭಾರತದ ಗುಪ್ತಚರ ತಂಡ, ಪೊಲೀಸರು ಹಾಗೂ ನೌಕಾಪಡೆಯ ಸಿಬ್ಬಂದಿ ಆಂಧ್ರಪ್ರದೇಶದ ಪೊನ್ನಪುಡಿ ಪಥುರು ಗ್ರಾಮಕ್ಕೆ ತೆರಳಿ ಉಗ್ರರು ಅಡಗಿದ್ದಾರೆಯೇ ಎಂಬ ಬಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರರ ಪ್ರವೇಶದ ಅನುಮಾನವು, ಬುಧವಾರ ಶ್ರೀಹರಿಕೋಟಾದಲ್ಲಿ ನಡೆದ ಇಸ್ರೋದ ಉಪಗ್ರಹ ಉಡ್ಡಯನಕ್ಕೂ ಆತಂಕ ಕವಿಯುವಂತೆ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.