ಶ್ರೀಲಂಕಾ ಬಾಂಬ್ ದಾಳಿ: ಕರ್ನಾಟಕದ ಐವರು ಜೆಡಿಎಸ್ ನಾಯಕರು ಬಲಿ!

Published : Apr 22, 2019, 11:51 AM ISTUpdated : Apr 22, 2019, 03:08 PM IST
ಶ್ರೀಲಂಕಾ ಬಾಂಬ್ ದಾಳಿ: ಕರ್ನಾಟಕದ ಐವರು ಜೆಡಿಎಸ್ ನಾಯಕರು ಬಲಿ!

ಸಾರಾಂಶ

ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ 5 ಮಂದಿ ಕನ್ನಡಿಗರ ದುರ್ಮರಣ| ಬಾಂಬ್ ಸ್ಫೋಟದಲ್ಲಿ 5 ಮಂದಿ ಜೆಡಿಎಸ್ ಮುಖಂಡರು ಸಾವು | ಕೊಲಂಬೊ ಪ್ರವಾಸಕ್ಕೆ ತೆರಳಿದ್ದ 7 ಮಂದಿ ಜೆಡಿಎಸ್ ಮುಖಂಡರು

ಕೊಲಂಬೋ[ಏ.22]: ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ 5 ಮಂದಿ ಕನ್ನಡಿಗರ ದುರ್ಮರಣ ಹೊಂದಿದ್ದಾರೆ. ಚುನಾವಣೆ ಪ್ರಚಾರ ಮುಗಿಸಿದ್ದ 7 ಮಂದಿ ಜೆಡಿಎಸ್ ಮುಖಂಡರು ಪ್ರವಾಸಕ್ಕೆಂದು ಶ್ರೀಲಂಕಾಗೆ ತೆರಳಿದ್ದರು. ದುರಾದೃಷ್ಟವಶಾತ್ ಭಾನುವಾರದಂದು ನಡೆದ ಸ್ಫೋಟಕ್ಕೆ ಐವರು ಬಲಿಯಾಗಿದ್ದಾರೆ.

ಕೊಲಂಬೋದ ಶಾಂಗ್ರಿಲಾದಲ್ಲಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ 7 ಮಂದಿಯಲ್ಲಿ ಜೆಡಿಎಸ್ ಮುಖಂಡರಾದ ಹನುಮಂತರಾಯಪ್ಪ, ರಂಗಪ್ಪ, ಶಿವಕುಮಾರ್ ಲಕ್ಷ್ಮೀನಾರಾಯಣ್, ರಮೇಶ್ ದುರ್ಮರಣಕ್ಕೀಡಾಗಿದ್ದಾರೆ. ಇವರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರ ಪ್ರಚಾರ ನಡೆಸಿದ್ದರು.

ಸಿಎಂ ಕುಮಾರಸ್ವಾಮಿ ಜೆಡಿಎಸ್ ಮುಖಂಡರ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಕುಮಾರಸ್ವಾಮಿ 'ಘಟನೆ ಸುದ್ದಿ ಕೇಳಿ ನನಗೆ ಇನ್ನಿಲ್ಲದ ಆಘಾತ, ನೋವಾಗಿದೆ. ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಾಣೆಯಾಗಿರುವವರ ಪತ್ತೆಗೆ ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ' ಎಂದಿದ್ದಾರೆ.

ಮೃತಪಟ್ಟವರ ವಿವರ : 

ಶಿವಣ್ಣ, ಲಕ್ಷ್ಮೀನಾರಾಯಣ, ಹನುಮಂತರಾಯಪ್ಪ, ರಂಗಪ್ಪ, ರಮೇಶ್

ನಾಪತ್ತೆಯಾದವರು : 

ಮಾರೇಗೌಡ- ಅಡಕಮಾರನಹಳ್ಳಿ ಗ್ರಾಮ, ಬೆಂಗಳೂರು ಉತ್ತರ ತಾಲೂಕು
ಪುಟ್ಟರಾಜು -  ಹಾರೋಕ್ಯಾತನಹಳ್ಳಿ, ಬೆಂಗಳೂರು ಉತ್ತರ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!