ದೇಗುಲ ಹುಂಡಿ ಹಣಕ್ಕೆ ಕಾಲ್ತುಳಿತ: 7 ಭಕ್ತಾದಿಗಳ ದುರ್ಮರಣ!

Published : Apr 22, 2019, 09:43 AM ISTUpdated : Apr 22, 2019, 03:10 PM IST
ದೇಗುಲ ಹುಂಡಿ ಹಣಕ್ಕೆ ಕಾಲ್ತುಳಿತ: 7 ಭಕ್ತಾದಿಗಳ ದುರ್ಮರಣ!

ಸಾರಾಂಶ

ತಮಿಳುನಾಡು ದೇಗುಲವೊಂದರಲ್ಲಿ ದೇಗುಲದ ಹುಂಡಿ ಹಣ ಹಂಚುವ ವೇಳೆ ಕಾಲ್ತುಳಿತದಿಂದಾಗಿ 7 ಭಕ್ತಾಧಿಗಳು ದುರ್ಮರಣ ಹೊಂದಿದ್ದಾರೆ

ತಿರುಚನಾಪಳ್ಳಿ[ಏ.22]: ರ್ಮಿಕ ಪೂಜಾ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿಗೆ ಸಿಲುಕಿ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಭಕ್ತರು ಸಾವನ್ನಪ್ಪಿದ ಘಟನೆ ಭಾನುವಾರ ತಿರುಚನಾಪಳ್ಳಿ ಜಿಲ್ಲೆಯ ತುರೈಯೂರಿನಲ್ಲಿ ಜರುಗಿದೆ.

ಚೈತ್ರ (ಚಿತ್ರ) ಪೂರ್ಣಿಮೆ ಅಂಗವಾಗಿ ತುರೈಯೂರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೇವಸ್ಥಾನದ ಹುಂಡಿಗೆ ಬಂದ ಹಣದಲ್ಲಿನ ನಾಣ್ಯಗಳನ್ನು (ಪದಿ ಕಾಸು) ದೇವಸ್ಥಾನದ ಅರ್ಚಕರು ಭಕ್ತರಿಗೆ ಹಂಚುವ ಸಂಪ್ರದಾಯವಿದೆ. ಇದನ್ನು ಮನೆಯಲ್ಲಿಟ್ಟರೆ ಐಶ್ವರ್ಯ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ನಾಣ್ಯಗಳನ್ನು ಪಡೆಯಲು ಭಕ್ತರು ಒಂದೇ ಬಾರಿಗೆ ಮುಗಿಬಿದ್ದು ನೂಕಾಟ ನಡೆದು ಏಳು ಜನರ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಿತರ ಗಾಯಾಳುಗಳನ್ನು ತುರೈಯೂರು ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದುರ್ಘಟನೆ ಕುರಿತು ತನಿಖೆ ಆರಂಭಗೊಂಡಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ