
ಹೈದರಾಬಾದ್: ವಜ್ರೋದ್ಯಮಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋಟಿ ರು. ವಂಚಿಸಿ ನ್ಯೂಯಾರ್ಕ್ ಪಂಚತಾರಾ ಹೋಟೆಲ್ನಲ್ಲಿ ನೆಲೆಸಿರಬಹುದು.
ಆದರೆ, ‘ವೀಸಾ’ ದೇವಾಲಯ ಎಂದೇ ಖ್ಯಾತಿ ಪಡೆದ ಹೈದ್ರಾಬಾದ್ನ ಚಿಲ್ಕೂರ್ ಬಾಲಾಜಿ ದೇವಾಲಯದ ಅರ್ಚಕರು, ಬ್ಯಾಂಕಿಂಗ್ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟು ನಿವಾರಣೆಗೆ ಮತ್ತು ವಂಚಕರನ್ನು ಭಾರತಕ್ಕೆ ಕರೆತರಲು ಸೋಮವಾರ ವಿಶೇಷ ಪೂಜೆ ನೆರವೇರಿಸಿದ್ದಾರೆ.
ತಮ್ಮ ಪ್ರಾರ್ಥನೆಯಿಂದ ವಿದೇಶಕ್ಕೆ ಪರಾರಿಯಾದವರನ್ನು ಭಾರತಕ್ಕೆ ಕರೆ ತರುವ ಯತ್ನ ಫಲಕೊಡುವುದಾಗಿ ಹೇಳಿದ್ದಾರೆ. ದೇವಾಲಯದ ಸಿಂಹ ದೇವರನ್ನು ಆಹ್ವಾನಿಸಲು ಅರ್ಚಕರು ‘ಋುಣ ವಿಮೋಚನಾ ನರಸಿಂಹ ಸ್ತೋತ್ರ’ಗಳನ್ನು ಅರ್ಚಕರು ಪಠಿಸಿದ್ದಾರೆ.
ವೀಸಾ ಪಡೆಯಲು ತೊಂದರೆ ಅನುಭವಿಸುತ್ತಿರುವ ಸಾವಿರಾರು ಜನರು ಚಿಲ್ಕೂರ್ ಬಾಲಾಜಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಚಿಲ್ಕೂರ್ ಬಾಲಾಜಿ ದೇವಾಲಯ ವೀಸಾ ದೇವಾಲಯ ಎಂದೇ ಖ್ಯಾತಿ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.