ರಾಜಕಾರಣದ ಬಿಸಿ ನಡುವೆ ಚಿಕ್ಕಮಗಳೂರಿನ ವಿನಯ್ ಗುರೂಜಿ ಮಠಕ್ಕೆ ಸ್ಪೀಕರ್

By Web DeskFirst Published Mar 27, 2019, 5:27 PM IST
Highlights

ಬಿಸಿ ರಾಜಕಾರಣದ ಬೆಳವಣಿಗೆಗಳ ನಡುವೆ ಸ್ಪೀಕರ್ ರಮೇಶ್ ಕುಮಾರ್ ಚಿಕ್ಕಮಗಳೂರಿನ ಆಶ್ರಮವೊಂದಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದಿದ್ದಾರೆ.

ಚಿಕ್ಕಮಗಳೂರು(ಮಾ. 27)  ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮಕ್ಕೆ ಸ್ಪೀಕರ್  ರಮೇಶ್ ಕುಮಾರ್ ಭೇಟಿ  ನೀಡಿ ಆಶೀರ್ವಾದ ಪಡೆದಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಸಾಥ್ ನೀಡಿದ್ದರು. ಕಳೆದ 5 ತಿಂಗಳ ಹಿಂದಷ್ಟೆ ಆಶ್ರಮಕ್ಕೆ ಸ್ಪೀಕರ್ ಭೇಟಿ ನೀಡಿದ್ದರು. ಭೇಟಿ ವೇಳೆ ವಿನಯ್ ಗುರೂಜಿಯಿಂದ  ರಮೇಶ್ ಕುಮಾರ್ ಹಲವು ಸಲಹೆ ಪಡೆದಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಬಳಿಯೇ ಕಲಬುರಗಿ ಲೋಕಸಭಾ ಅಭ್ಯರ್ಥಿ ಉಮೇಶ್ ಜಾಧವ್ ರಾಜೀನಾಮೆಯಿದೆ. 

click me!