
ಹೈದರಾಬಾದ್: ದಕ್ಷಿಣ ಭಾರತದ ಚಿತ್ರಗಳ ಮೇಲೆ ಡಿಜಿಟಲ್ ಸೇವಾ ಪೂರೈಕೆದಾರರಿಂದ ವಿಧಿಸಲಾಗಿರುವ ವರ್ಚುವಲ್ ಮುದ್ರಣ ಶುಲ್ಕ (ವಿಪಿಎಫ್) ವಿರೋಧಿಸಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸುಮಾರು 1,800 ಚಿತ್ರ ಮಂದಿಗಳು ಶುಕ್ರವಾರ ಬಂದ್ ಆಗಿವೆ. ಬೇಡಿಕೆ ಈಡೇರದಿದ್ದಲ್ಲಿ ಕರ್ನಾಟಕದಲ್ಲೂ ಮಾ.9ರಿಂದ ಚಿತ್ರ ಮಂದಿಗಳು ಬಂದ್ ನಡೆಸಲಿವೆ.
ಸೆಟಲೈಟ್ ಬಳಸಿ ಥಿಯೇಟರ್ಗಳಲ್ಲಿ ಸಿನೆಮಾ ಪ್ರದರ್ಶನಕ್ಕೆ ಉಪಕರಣಗಳನ್ನು ಪೂರೈಸುವ ಸೇವಾ ಪೂರೈಕೆದಾರರು, ಚಿತ್ರ ನಿರ್ಮಾಪಕರು ಮತ್ತು ಚಿತ್ರ ಮಂದಿರಗಳ ಮೇಲೆ ವಿಧಿಸುವ ಶುಲ್ಕವನ್ನು ವಿಪಿಎಫ್ ಎನ್ನಲಾಗುತ್ತದೆ.
ಸೇವಾ ಪೂರೈಕೆದಾರರೊಂದಿಗಿನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಕರೆ ಕೊಡಲಾಗಿದೆ ಎಂದು ದಕ್ಷಿಣ ಭಾರತೀಯ ಚಿತ್ರ ನಿರ್ಮಾಪಕರ ಮಂಡಳಿ ಅಧ್ಯಕ್ಷ ಡಿ. ಸುರೇಶ್ ಹೇಳಿದ್ದಾರೆ. ಕೇರಳ, ತಮಿಳುನಾಡಿನಲ್ಲೂ ಕೆಲವು ಚಿತ್ರಮಂದಿರಗಳು ಬಂದ್ ಆಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.