ಕರ್ನಾಟಕದ ಗಡಿಯಲ್ಲಿ ಆಂಧ್ರ ಸಂಸದನ ಪುತ್ರ ಗೂಂಡಾಗಿರಿ

Published : Apr 24, 2017, 10:58 AM ISTUpdated : Apr 11, 2018, 12:35 PM IST
ಕರ್ನಾಟಕದ ಗಡಿಯಲ್ಲಿ ಆಂಧ್ರ ಸಂಸದನ ಪುತ್ರ ಗೂಂಡಾಗಿರಿ

ಸಾರಾಂಶ

ಟೋಲ್​ ಹಣ ಕೇಳಿದ್ದಕ್ಕೆ ಟೋಲ್​ ಸಿಬ್ಬಂದಿ ವಿರುದ್ಧ ಗುಡುಗಿದ ಸಂಸದನ ಮಗ, ತನ್ನ 50 ಬೆಂಬಲಿಗರ ತಂಡದಿಂದ ಟೋಲ್ ಚಿಂದಿ ಮಾಡಿದ್ದಾನೆ. ಘಟನೆಯಲ್ಲಿ ಕಂಪ್ಯೂಟರ್​​, ಪೀಠೋಪಕರಣ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ.

ಕೋಲಾರ(ಏ. 24): ಬಾಗೇಪಲ್ಲಿ ಟೋಲ್ ಬಳಿ ಆಂಧ್ರ ಸಂಸದನೊಬ್ಬನ ಪುತ್ರ ಗೂಂಡಾಗಿರಿ ನಡೆಸಿ ಟೋಲ್ ಚಿಂದಿ ಮಾಡಿದ್ದಾನೆ.  ಟೋಲ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಗಾಜುಗಳನ್ನ ಪುಡಿಪುಡಿಮಾಡಿದ್ದಾನೆ. ದಾಂಧಲೆ ನಡೆಸಿದ್ದು, ಆಂಧ್ರಪ್ರದೇಶದ ಹಿಂದೂಪುರ ಟಿಡಿಪಿ ಸಂಸದ ನಿಮ್ಮಲ ಕೃಷ್ಣಪ್ಪ ಪುತ್ರ ಅಂಬರೀಷ್​​ ಮತ್ತು ಸ್ನೇಹಿತರು.

ಟೋಲ್​ ಹಣ ಕೇಳಿದ್ದಕ್ಕೆ ಟೋಲ್​ ಸಿಬ್ಬಂದಿ ವಿರುದ್ಧ ಗುಡುಗಿದ ಸಂಸದನ ಮಗ, ತನ್ನ 50 ಬೆಂಬಲಿಗರ ತಂಡದಿಂದ ಟೋಲ್ ಚಿಂದಿ ಮಾಡಿದ್ದಾನೆ. ಘಟನೆಯಲ್ಲಿ ಕಂಪ್ಯೂಟರ್​​, ಪೀಠೋಪಕರಣ ಧ್ವಂಸಗೊಳಿಸಿ, ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಬಳಿಕ ಟೋಲ್​ ಗೇಟ್​ ನಲ್ಲೇ ಕಾರು ನುಗ್ಗಿಸಿಕೊಂಡು ಅಂಬರೀಷ್ ತೆರಳಿದ್ದಾನೆ.

ಆಂಧ್ರ ಎಂಪಿ ಮಗನ ಗೂಂಡಾಗಿರಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಗೇಪಲ್ಲಿ ಪೊಲೀಸರು ಆರೋಪಿ ಅಂಬರೀಷ್'ನನ್ನು ಬಂಧಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!