ಗೌರಿ ಲಂಕೇಶ್ ಕೊಲೆ ಪ್ರಕರಣದ ಎಸ್ಐಟಿ ಸಹಾಯಕ ತನಿಖಾಧಿಕಾರಿ ಡಿವೈಎಸ್ಪಿ ಟಿ.ರಂಗಪ್ಪ ಸೇರಿದಂತೆ 18 ಮಂದಿ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರು : ಸ್ವಾತಂತ್ರ್ಯೋತ್ಸವದ ನಿಮಿತ್ತ ಪೊಲೀಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಲಾಗುವ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಪ್ರಸಕ್ತ ಸಾಲಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಎಸ್ಐಟಿ ಸಹಾಯಕ ತನಿಖಾಧಿಕಾರಿ ಡಿವೈಎಸ್ಪಿ ಟಿ.ರಂಗಪ್ಪ ಸೇರಿದಂತೆ 18 ಮಂದಿ ಶ್ಲಾಘನೀಯ ಸೇವಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಶ್ಲಾಘನೀಯ ಸೇವಾ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಟಿ.ಸುಂದರರಾಜು, ಕೆಎಸ್ಆರ್ಪಿ ತುಮಕೂರು ಉಪಕಮಾಂಡೆಂಟ್
ಎಂ.ಎನ್.ಕರಿಬಸವನಗೌಡ, ಮೈಕೋ ಲೇಔಟ್ ಎಸಿಪಿ
ಸಿ.ಗೋಪಾಲ್, ಮೈಸೂರಿನ ಎಸಿಪಿ
ಕೆ.ಪುರುಷೋತ್ತಮ್, ಸಿಐಡಿ ಡಿವೈಎಸ್ಪಿ
ಎಸ್ಐಟಿ ಡಿವೈಎಸ್ಪಿ ಟಿ.ರಂಗಪ್ಪ
ಟಿ.ಕೋದಂಡರಾಮ, ಬೆಂಗಳೂರು ಎಸಿಬಿ ಡಿವೈಎಸ್ಪಿ
ಉಮೇಶ್ ಗಣಪತಿ ಶೇಠ್, ಮೈಸೂರಿನ ಎಸಿಬಿ ಡಿವೈಎಸ್ಪಿ
ರುದ್ರಪ್ಪ ಎಸ್.ಉಜ್ಜನಕೊಪ್ಪ, ಕೊಪ್ಪಳದ ಎಸಿಬಿ ಡಿವೈಎಸ್ಪಿ
ಮಂಜುನಾಥ ಕೆ.ಗಂಗಲ್, ದಾವಣಗೆರೆ ಗ್ರಾಮಾಂತರ ವಿಭಾಗ ಡಿವೈಎಸ್ಪಿ
ಡಿವೈಎಸ್ಪಿ ಎಂ.ಬಾಬು, ದಾವಣಗೆರೆ ವಿಶೇಷ ಶಾಖೆ
ಸದಾನಂದ.ಎ.ತಿಪ್ಪಣ್ಣನವರ್, ಅರಸಿಕೆರೆ ಉಪ ವಿಭಾಗದ ಡಿವೈಎಸ್ಪಿ
ಸುಧೀರ್ ಎಸ್.ಶೆಟ್ಟಿ, ಸಿಐಡಿ ಇನ್ಸ್ಪೆಕ್ಟರ್ ,
ಎನ್.ಸೋಮಶೇಖರ್, ಕೋಲಾರ ಪಿಎಸ್ಐ
ಟಿ.ಎನ್.ನಾಗಭೂಷಣ್, ಸಿಐಡಿ ಎಎಸ್ಐ
ಸಿ.ಕೋಮಲಾಚಾರ್, ರಾಣೆಬೆನ್ನೂರು ಪಟ್ಟಣ ಠಾಣೆ ಎಎಸ್ಐ
ಎಂ.ಎಚ್.ಪಾಪಣ್ಣ, ಬೆಂಗಳೂರು ಕೆಎಸ್ಆರ್ಪಿ ತುಕಡಿ ಎಆರ್ಎಸ್ಐ
ಸಿದ್ದಲಿಂಗೇಶ್ವರ, ವಿದ್ಯಾರಣ್ಯಪುರ ಠಾಣೆ ಹೆಡ್ ಕಾನ್ಸ್ಟೇಬಲ್ , ಬೆಂಗಳೂರು
ಶಿವಪ್ಪ ಮಲ್ಲಿಕಾಜಪ್ಪ ಬಿಳಿಗಿ, ಮೈಸೂರಿನ ಕೆಎಸ್ಆರ್ಪಿ 5ನೇ ಬೆಟಾಲಿಯನ್ ಹೆಡ್ ಕಾನ್ಸ್ಟೇಬಲ್