
ಬೆಂಗಳೂರು (ಸೆ.25): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದೆ.
ಸ್ಥಳೀಯ ರೌಡಿಗಳು ಗೌರಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯಲ್ಲಿ ಇಂದು ಜೈಲಿನಲ್ಲಿರೋ ಹಾಲಿ ರೌಡಿ ಟಿಬೇಟ್ ಬಾಲಾಜಿ ಮತ್ತು ಸಹಚರರನ್ನ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಗೌರಿ ಹತ್ಯೆಯಾದ ದಿನದಂದು ರೌಡಿ ಟಿಬೇಟ್ ಬಾಲಾಜಿ ಸಹಚರರ ಮೊಬೈಲ್ ನೆಟ್ವರ್ಕ್ ಆರ್ ಆರ್ ನಗರ ಮತ್ತು ಹೆಬ್ಬಾಳ ದ ಸುತ್ತಮುತ್ತ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆಯಲ್ಲಿ ಟಿಬೇಟ್ ಬಾಲಾಜಿ ಮತ್ತು ಸಹಚರರ ಕೈವಾಡವೇನಾದರೂ ಇದೆಯಾ ಎಂದು ಶಂಕಿಸಿ ಎಸ್ಐಟಿ ಅಧಿಕಾರಿಗಳು ಬಾಲಾಜಿ ಮತ್ತು ಸಹಚರರನ್ನ ವಿಚಾರಣೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.