ಸುಡು ಸುಡು ದೆಹಲಿ: ನೀರುಣಿಸುವ ಸರ್ದಾರ್ ಜೀ ಅಲ್ಲ ಮಾಮೂಲಿ!

Published : Jun 06, 2019, 03:21 PM IST
ಸುಡು ಸುಡು ದೆಹಲಿ: ನೀರುಣಿಸುವ ಸರ್ದಾರ್ ಜೀ ಅಲ್ಲ ಮಾಮೂಲಿ!

ಸಾರಾಂಶ

ಸೂರ್ಯನೊಡ್ಡಿದ ಸವಾಲು ಸ್ವೀಕರಿಸಿದ ಸರ್ದಾರ್‌ಜೀ| ಸುಡುವ ದೆಹಲಿ ರಸ್ತೆಯಲ್ಲಿ ಸರ್ದಾರ್ ಜೀ ನೀರಿನ ಸ್ಕೂಟರ್ | ಬಿಸಿಲಿನಿಂದ ಬಳಲಿ ಬೆಂಡಾದವರಿಗೆ ನೀರು ಕೊಡುವ ತಾತ| ರಾಷ್ಟ್ರ ರಾಜಧಾನಿ ಜನರ ಮನೆ ಮಾತಾದ ಸಿಖ್ ತಾತ| ಸ್ಕೂಟರ್‌ನಲ್ಲಿ ನೀರು ತಂದು ಬಾಯಾರಿಕೆ ತಣಿಸುವ ಸರ್ದಾರ್‌ಜೀ| ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ತಾತ| 

ನವದೆಹಲಿ(ಜೂ.06): ರಾಷ್ಟ್ರ ರಾಜಧಾನಿ ನವದೆಹಲಿ ಅಕ್ಷರಶಃ ಕಾದ ಕೆಂಡವಾಗಿದೆ. 45 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನದಿಂದಾಗಿ ಜನ ಕಂಗಾಲಾಗಿದ್ದಾರೆ.

ಆದರೆ ಸುಡುವ ಊರಲ್ಲೋರ್ವ ಸರ್ದಾರ್‌ಜೀ ತಾತ ಮಾತ್ರ ಬಿಸಿಲಿನಿಂದ ಬಳಲುವ ಜನರಿಗೆ ನೀರು ವಿತರಿಸುತ್ತಾ ಸೂರ್ಯನೊಡ್ಡಿದ ಸವಾಲನ್ನು ಸ್ವೀಕರಿಸಿದ್ದಾರೆ.

ಹೌದು, ರಾಷ್ಟ್ರ ರಾಜಧಾನಿಯಲ್ಲಿ ಇದೀಗ ಎಲ್ಲಿ ನೋಡಿದರೂ ಈ ಸಿಖ್ ತಾತನದ್ದೇ ಮಾತು. ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿ ಬಿಸಲಿನಲ್ಲಿ ಊರು ಸುತ್ತುವ ಜನರನ್ನು ತಡೆದು ಒಂದು ಗ್ಲಾಸ್ ನೀರು ಕೊಡುತ್ತಾರೆ ಈ ತಾತ.

ಬಸ್ಸುಗಳಲ್ಲಿ ಓಡಡುವ ಪ್ರಯಾಣಿಕರು ಮತ್ತು ಪಾದಚಾರಿಗಳಿಗೆ ನೀರು ವಿತರಿಸುವ ಈ ತಾತ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ.

ಟ್ವಿಟ್ಟರ್‌ನಲ್ಲಿ ನೀರು ವಿತರಿಸುವ ತಾತನ ವಿಡಿಯೋಗೆ 6 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದ್ದು, 3 ಸಾವಿರಕ್ಕೂ ಅಧಿಕ ಬಾರಿ ರಿಟ್ವೀಟ್ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?