
ದಿಲ್ಲಿ ಹೈಕಮಾಂಡ್ ನಾಯಕರ ಲೆಕ್ಕಾಚಾರದ ಪ್ರಕಾರ ಭಿನ್ನಮತೀಯ ಚಟುವಟಿಕೆಗಳಿಗೆ ಸಿದ್ದರಾಮಯ್ಯ ಅವರ ಆಶೀರ್ವಾದವಿದೆ. ಇಲ್ಲವಾದಲ್ಲಿ ಎಂ ಬಿ ಪಾಟೀಲರಿಂದ ಹಿಡಿದು ಹ್ಯಾರಿಸ್ವರೆಗೆ ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡುವ ಧೈರ್ಯ ತೋರಲು ಸಾಧ್ಯವಿರಲಿಲ್ಲವಂತೆ.
ಸಿದ್ದು ಇಂಥ ಚಟುವಟಿಕೆಗಳ ಮುಖಾಂತರ ‘ನೋಡಿ ನಾನು ಹೇಗೆ 5 ವರ್ಷ ಭಿನ್ನಮತದ ಸೊಲ್ಲು ಇಲ್ಲದಂತೆ ಅಧಿಕಾರ ನಡೆಸಿದ್ದೇನೆ. ಆದರೆ ಪರಮೇಶ್ವರ್ ಅವರಿಗೆ ಹಿಡಿತ ಇಲ್ಲ. ನನ್ನನ್ನು ಕಡೆಗಣಿಸಿ ಸರ್ಕಾರ ನಡೆಸುತ್ತೇವೆ ಎಂದುಕೊಂಡಿದ್ದರೆ ಹುಷಾರು’ ಎಂದು ದಿಲ್ಲಿ ಹೈಕಮಾಂಡ್ಗೆ ಸಂಕೇತ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ನ ಹಾಗೂ ಸರ್ಕಾರದ ಸ್ಥಿರತೆಯ ಜುಟ್ಟು ತನ್ನ ಕೈಯಲ್ಲಿದೆ ಎಂದು ದೇವೇಗೌಡರ ಕುಟುಂಬಕ್ಕೂ ಹೇಳುವ ಪ್ರಯತ್ನವಿದು ಎಂದು ಹೇಳಲಾಗುತ್ತಿದೆ. ಅಂದ ಹಾಗೆ ಇಷ್ಟೆಲ್ಲಾ ನಡೆಯುವಾಗ ಸಿದ್ದರಾಮಯ್ಯ ಬಾದಾಮಿಯಲ್ಲಿ ಮತದಾರ ಪ್ರಭುವಿಗೆ ಧನ್ಯವಾದ ಹೇಳುತ್ತಿದ್ದರು!
-ಪ್ರಶಾಂತ್ ನಾತು , ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.