ತಾಕತ್ತಿದ್ದರೆ ದಲಿತ ನಾಯಕನನ್ನು ಸಿಎಂ ಮಾಡಿ : ದೇವೇಗೌಡರಿಗೆ ಸಿಎಂ ಸವಾಲ್

Published : Dec 14, 2017, 04:15 PM ISTUpdated : Apr 11, 2018, 12:41 PM IST
ತಾಕತ್ತಿದ್ದರೆ ದಲಿತ ನಾಯಕನನ್ನು ಸಿಎಂ ಮಾಡಿ : ದೇವೇಗೌಡರಿಗೆ ಸಿಎಂ ಸವಾಲ್

ಸಾರಾಂಶ

ದೇವೇಗೌಡರ ಶೈಲಿಯಲ್ಲಿ ಗೌಡರನ್ನು ಟೀಕಿಸಿದ ಅವರು' ನನ್ನ ಕೊನೆ ಆಸೆ ಮಗನನ್ನು ಸಿಎಂ ಮಾಡಬೇಕೆನ್ನುವುದು ಎನ್ನುತ್ತಿದ್ದಾರೆ ದೇವೇಗೌಡರು, ಆದರೆ ದಲಿತರನ್ನು ಏಕೆ ಸಿಎಂ ಮಾಡಬಾರದು'ಎಂದು ಪ್ರಶ್ನಿಸಿದರು.

ಕೊಪ್ಪಳ(ಡಿ.14): ತಾಕತ್ತಿದ್ದರೆ ದಲಿತ ನಾಯಕನನ್ನು ಸಿಎಂ ಮಾಡುವಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮಾವೇಶ ಮಾಡುತ್ತಿದೆ. ದೇವೇಗೌಡರ ಜತೆ ಕೆಲಸ ಮಾಡಿರುವ ನನಗೆ ಎಲ್ಲವೂ ಗೊತ್ತಿದೆ. ದಲಿತರನ್ನು ಉಪ ಮುಖ್ಯಮಂತ್ರಿ ಮಾಡುತ್ತೇನೆಂದು ಎಚ್ಡಿಕೆ ಹೇಳುತ್ತಿದ್ದಾರೆ. ಆದರೆ ದಲಿತರನ್ನು ಸಿಎಂ ಏಕೆ ಮಾಡಬಾರದೆಂದು ಸಿಎಂ ಪ್ರಶ್ನಿಸಿದರು.   

ದೇವೇಗೌಡರ ಶೈಲಿಯಲ್ಲಿ ಗೌಡರನ್ನು ಟೀಕಿಸಿದ ಅವರು' ನನ್ನ ಕೊನೆ ಆಸೆ ಮಗನನ್ನು ಸಿಎಂ ಮಾಡಬೇಕೆನ್ನುವುದು ಎನ್ನುತ್ತಿದ್ದಾರೆ ದೇವೇಗೌಡರು, ಆದರೆ ದಲಿತರನ್ನು ಏಕೆ ಸಿಎಂ ಮಾಡಬಾರದು'ಎಂದು ಪ್ರಶ್ನಿಸಿದರು. ನಾನು ಮಾತ್ರ ದಲಿತರ ಪರ ಇದ್ದೇನೆ. ದಲಿತರು ಮುಖ್ಯಮಂತ್ರಿ ಆಗಬೇಕು ಎನ್ನುವುದೇ ನನ್ನ ಆಸೆ'ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ