ಕಾಂಗ್ರೆಸ್‌ನಲ್ಲಿ ಟ್ರಬಲ್ ಶೂಟರ್ ಸಿದ್ದು ನಡೆದಿದ್ದೇ ಹಾದಿ

By Web DeskFirst Published Dec 25, 2018, 12:10 PM IST
Highlights

ಮುಖ್ಯಮಂತ್ರಿ ಹುದ್ದೆಯಿಣದ ಕೆಳಗಿಳಿದ ನಂತರವೂ ಇವರ ಖದರ್ ಸ್ವಲ್ಪವೂ ಬದಲಾಗಿಲ್ಲ. ಈಗಲೂ ಕಾಂಗ್ರೆಸ್‌ನಲ್ಲಿ ಇವರು ಪವರ್‌ಫುಲ್ ನಾಯಕರೇ. ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಕೈ ಕೂಡಾ ಇವರೇ. 

ಬೆಂಗಳೂರು (ಡಿ. 25): ಕಾಂಗ್ರೆಸ್‌ನಲ್ಲಿ ಅಧಿಕಾರ ಹೋದ ಮೇಲೆ ಯಾರೂ ಮಾತನಾಡಿಸೋದಿಲ್ಲ. ಆದರೆ ಸಿದ್ದರಾಮಯ್ಯ ಇದಕ್ಕೆ ಅಪವಾದ. ಮೊನ್ನೆ ದಿಲ್ಲಿಗೆ ಬಂದಿದ್ದ ಸಿದ್ದರಾಮಯ್ಯ ಅವರ ರೂಮ್ ಎದುರು ಅತಿ ಹೆಚ್ಚು ಶಾಸಕರು ಭೇಟಿಗೆ ಕಾಯುತ್ತಿದ್ದರು.

ಸಚಿವ ಸ್ಥಾನ : ಡಿಕೆಶಿ ನೀಡಿದ ಹೊಸ ಸುಳಿವೇನು..?

ಬಂದವರಿಗೆಲ್ಲ ‘ಅಯ್ಯೋ ಈ ಬಾರಿ ಆಗೋಲ್ಲ ಹೋಗು, ರಾಜಕೀಯ ಕಾರ್ಯದರ್ಶಿ ಮಾಡಸ್ತೀನಿ...ಲೋಕಸಭಾ ಚುನಾವಣೆ ಇದೆ. ಫುಲ್ ಜಾತಿ ಪ್ರಾತಿನಿಧ್ಯ’ ಎಂದು ನೇರವಾಗಿಯೇ ಹೇಳಿ ಕಳುಹಿಸುತ್ತಿದ್ದರು. ಆ ಕಡೆ ಖರ್ಗೆ, ಪರಮೇಶ್ವರ್, ಡಿ ಕೆ ಶಿವಕುಮಾರ್, ದಿನೇಶ್ ಗುಂಡೂರಾವ್ರನ್ನು ಶಾಸಕರು ಭೇಟಿ ಯಾಗಲು ಹೋದಾಗ ‘ಒಂದ್ ಮಾತು ವೇಣುಗೋಪಾಲ್‌ಗೆ ಹೇಳ್ತೀನಿ ನೋಡೋಣ’ ಎಂಬ ಟಿಪಿಕಲ್ ಕಾಂಗ್ರೆಸ್ ಡೈಲಾಗ್ ಬರುತ್ತಿದ್ದರೆ, ಸಿದ್ದರಾಮಯ್ಯ ಬಳಿ ಅವೆಲ್ಲ ಇಲ್ಲ.
ಒಂದೋ ‘ಮಾಡಿಸ್ತೀನಿ ಚಿಂತೆ ಮಾಡಬೇಡ’ ಅಥವಾ ‘ಇಲ್ಲ ಆಗೋಲ್ಲ’ ಅಷ್ಟೇ ಮಾತು.

ಗೌಡ್ರು ಬೇಡ ಅಂದ್ರು, ರಾಹುಲ್‌ಗೂ ಇಷ್ಟವಿಲ್ಲ; ಸಂಪುಟ ವಿಸ್ತರಣೆ ಮಾಡಿಸಿದ್ದು ಯಾರು?

ಎನ್ ಎ ಹ್ಯಾರಿಸ್‌ರನ್ನು ಮಂತ್ರಿ ಮಾಡಿ ಎಂದು ಬೆಂಗಳೂರಿನ ಶಾಸಕರು ಬಂದಾಗ, ‘ಹಳೆಯ ಬೆಂಗಳೂರಿಗೆ ಜಮೀರ್ ಇದ್ದಾನೆ. ಇನ್ನೊಂದು ಮುಸ್ಲಿಂ ಆಗೋದಿಲ್ಲ. ಈ ಸಲ ಹೈದರಾಬಾದ್ ಕರ್ನಾಟ ಕಕ್ಕೆ ಕೊಡ್ತೀವಿ’ ಎಂದು ಕಳುಹಿಸಿಯೇಬಿಟ್ಟರು. ಸೋತರೂ ಸಿದ್ದುಗೆ ಕರ್ನಾಟಕದ ಕಾಂಗ್ರೆಸ್‌ಗೆ ತಾನೆಷ್ಟು ಅನಿವಾರ್ಯ ಎಂದು ಗೊತ್ತಿದೆ. ಅದಕ್ಕೇ ಅಲ್ಲವೆ ಈ ಪಾಟಿ ಕಾನ್ಫಿಡೆನ್ಸ್.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!