'ಬಿಜೆಪಿಯಲ್ಲಿ ಪ್ರಧಾನಿ ಮೋದಿಗೆ ಬಳೆ ಕೊಡುವವರಾರು ಇಲ್ವೇ'? ಕಪಿಲ್ ಸಿಬಲ್ ಟಾಂಗ್

Published : May 01, 2017, 02:51 PM ISTUpdated : Apr 11, 2018, 01:09 PM IST
'ಬಿಜೆಪಿಯಲ್ಲಿ ಪ್ರಧಾನಿ ಮೋದಿಗೆ ಬಳೆ ಕೊಡುವವರಾರು ಇಲ್ವೇ'? ಕಪಿಲ್ ಸಿಬಲ್ ಟಾಂಗ್

ಸಾರಾಂಶ

ಭಾರತೀಯ ಸೇನೆಯ ಮೇಲೆ ಪಾಕ್ ಸೇನೆ ದಾಳಿ ಮಾಡಿರುವುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.  ಬಿಜೆಪಿಯ ಯಾವುದಾದರೂ ನಾಯಕರು ಪ್ರಧಾನಿ ಮೋದಿಗೆ ಈಗ ಬಳೆಯನ್ನು ಕಳುಹಿಸುತ್ತಾರಾ ಎಂದು ಕಿಡಿಕಾರಿದ್ದಾರೆ.

ನವದೆಹಲಿ (ಮೇ.01): ಭಾರತೀಯ ಸೇನೆಯ ಮೇಲೆ ಪಾಕ್ ಸೇನೆ ದಾಳಿ ಮಾಡಿರುವುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.  ಬಿಜೆಪಿಯ ಯಾವುದಾದರೂ ನಾಯಕರು ಪ್ರಧಾನಿ ಮೋದಿಗೆ ಈಗ ಬಳೆಯನ್ನು ಕಳುಹಿಸುತ್ತಾರಾ ಎಂದು ಕಿಡಿಕಾರಿದ್ದಾರೆ.

ಯುಪಿಎ ಆಡಳಿತವಿದ್ದಾಗ ಇಂತದ್ದೇ ಘಟನೆ ನಡೆದಾಗ  ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅಂದಿನ ಪ್ರಧಾನಿಯವರಿಗೆ ಬಳೆಯನ್ನು ಗಿಫ್ಟ್ ಆಗಿ ಕೊಡಲು ಬಯಸಿದ್ದರು. ಈಗ ತಮ್ಮ ಪ್ರಧಾನಿಯವರಿಗೆ ಬಳೆಯನ್ನು ಕೊಡುತ್ತಾರಾ ಎಂದು ಕಪಿಲ್ ಸಿಬಲ್ ಕೇಳಿದ್ದಾರೆ.

ಯುಪಿಎ ಆಡಳಿತವಿದ್ದಾಗ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಇಂದೋರ್ ನಲ್ಲಿ ಭಾಷಣ ಮಾಡುತ್ತಾ, 2013 ರಲ್ಲಿ ಭಾರತೀಯ ಸೇನೆ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಗೆ ಬಳೆಯನ್ನು ಉಡುಗೊರೆಯಾಗಿ ನೀಡಬೇಕೆಂದಿದ್ದೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಕಪಿಲ್ ಸಿಬಲ್ ಸ್ಮೃತಿ ಇರಾನಿಗೆ ಟಾಂಗ್ ನೀಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌
87 ವರ್ಷದ ಪ್ರಸಿದ್ಧ ಪೇಂಟರ್ ಮಗುವಿಗೆ ತಾಯಿಯಾದ 37 ವರ್ಷದ ಪತ್ನಿ, ಉಳಿದ ಮಕ್ಕಳೊಂದಿಗೆ ಬಂಧವೇ ಕಟ್