ಟಾಯ್ಲೆಟ್'ನಲ್ಲಿ ಕೆಪಿಎಸ್ಸಿ ಭೂರಿ ಭೋಜನ: 9 ಟಾಯ್ಲೆಟ್, 7 ವರ್ಷ, 60 ಲಕ್ಷ..!

Published : Sep 15, 2016, 03:58 AM ISTUpdated : Apr 11, 2018, 12:38 PM IST
ಟಾಯ್ಲೆಟ್'ನಲ್ಲಿ ಕೆಪಿಎಸ್ಸಿ ಭೂರಿ ಭೋಜನ: 9 ಟಾಯ್ಲೆಟ್, 7 ವರ್ಷ, 60 ಲಕ್ಷ..!

ಸಾರಾಂಶ

ಬೆಂಗಳೂರು(ಸೆ.15): ಸಾಮಾನ್ಯವಾಗಿ ಒಂದು ಕಟ್ಟಡದಲ್ಲಿ  ಶೌಚಾಲಯ ನಿರ್ವಹಣೆಗೆ ಎಷ್ಟು ಖರ್ಚಾಗಬಹುದು..? ಒಂದು ವರ್ಷಕ್ಕೆ ಎಷ್ಟು ಖರ್ಚಾಗಬಹುದು? ಹೆಚ್ಚೆಂದರೆ 10 ಸಾವಿರ, ಸಾಧ್ಯವಿಲ್ಲ. ಸರ್ಕಾರಿ ದುಡ್ಡು ಎಂದರೆ ಸ್ವಲ್ಪ ಜಾಸ್ತಿನೇ ಖರ್ಚಾಗಬೇಕು. ಇದು ಅವರೇ ಹಾಕಿಕೊಂಡಿರುವ ನ್ಯಾಯ. ಆದರೆ, ಈ ಲೆಕ್ಕ ಕೇಳಿದರೆ, ಎದೆ ಧಸಕ್ ಎನ್ನುತ್ತದೆ. ಯಾಕೆಂದರೆ, ಕೆಪಿಎಸ್​ಸಿ ಬಿಲ್ಡಿಂಗ್'ನ. ಅದರ ಟಾಯ್ಲೆಟ್​ ನಿರ್ವಹಣೆಗೆ ಖರ್ಚಾಗಿರುವುದು 60 ಲಕ್ಷಕ್ಕೂ ಹೆಚ್ಚು ಇದು ಕೂಡಾ ಕೇವಲ 7 ವರ್ಷಕ್ಕೆ.

60 ಲಕ್ಷ ಖರ್ಚು ಮಾಡಿ ನಿರ್ವಹಣೆ ಮಾಡಿದ ಆ ಟಾಯ್ಲೆಟ್'ಗಳು ಅದೆಷ್ಟು ಅದ್ಭುತವಾಗಿರಬಹುದು? ಅರಮನೆ ಇದ್ದಂತೆ ಇರುತ್ತದೆ ಅಂದುಕೊಂಡಿದ್ದೀರಾ? ಆದರೆ ಅದು ಬಸ್​ಸ್ಟ್ಯಾಂಡ್ ಪಬ್ಲಿಕ್ ಟಾಯ್ಲೆಟ್​ಗಳಿಗಿಂತ ಸ್ವಲ್ಪ ಉತ್ತಮವಾಗಿವೆ ಅಷ್ಟೆ, ಹಾಗಾದರೆ, 60 ಲಕ್ಷ ಖರ್ಚಾಗಿದ್ದು ಹೇಗೆ? ಇಲ್ಲಿದೆ ವಿವರ.

ಟಾಯ್ಲೆಟ್​ನಲ್ಲಿ ಕೆಪಿಎಸ್​ಸಿ ಭೂರಿ ಭೋಜನ ಹೇಗೆಲ್ಲ ಮಾಡಿದ್ದಾರೆ ಎಂದರೆ, ಈ ಏಳು ವರ್ಷದಲ್ಲಿ 12ಕ್ಕೂ ಹೆಚ್ಚು ಬಾರಿ ಟಾಯ್ಲೆಟ್​ಗೆ ರಿಪೇರಿ ಭಾಗ್ಯ ಕರುಣಿಸಿದ್ದಾರೆ. ಒಂದೊಂದ್ಸಲದ ರಿಪೇರಿಗೂ ಕನಿಷ್ಠ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ನಿಮ್ಗೊಂದು ಲೆಕ್ಕ ಹೇಳ್ತೀವಿ ಕೇಳಿ. ಈ ರಿಪೇರಿ ದುಡ್ಡಿನಲ್ಲಿ ಕನಿಷ್ಠ 250 ಟಾಯ್ಲೆಟ್ ಕಟ್ಟಿಸಬಹುದಿತ್ತು.

ಇದು ಸುವರ್ಣ ನ್ಯೂಸ್​ಗೆ ಎಕ್ಸ್​ಕ್ಲೂಸಿವ್ ಆಗಿ ಸಿಕ್ಕ ದಾಖಲೆಗಳು ಬಿಚ್ಚಿಟ್ಟ ಕಥೆ. ಎಲ್ಲವನ್ನೂ ಈ ಅಧಿಕಾರಿಗಳು ಅತ್ಯಂತ ಕಾನೂನುಬದ್ಧವಾಗಿ ಮಾಡಿದ್ದಾರೆ. ನಾಚಿಕೆ & ನೈತಿಕತೆ ಎರಡನ್ನೂ ಮರೆತುಬಿಟ್ಟಿದ್ದಾರೆ. ಇದೆಲ್ಲ ಕೇವಲ 2007ರಿಂದ 2015ರವರೆಗೆ ಖರ್ಚು ಮಾಡಿರುವ ಲೆಕ್ಕ.

ಕಾರ್ಪೊರೇಟ್ ಕಂಪೆನಿಗಿಂತ 10 ಪಟ್ಟು ಹೆಚ್ಚು ಖರ್ಚು

ಕಾರ್ಪೊರೇಟ್ ಕಂ. ವರ್ಷಕ್ಕೆ ಖರ್ಚು ಮಾಡುವುದು ಗರಿಷ್ಠ 1 ಲಕ್ಷ..! 

ಕೆಪಿಎಸ್​ಸಿ ಖರ್ಚು ಮಾಡಿದ್ದು ವರ್ಷಕ್ಕೆ ಕನಿಷ್ಠ 10 ಲಕ್ಷ..!

ಹಾಗಾದರೆ, ಕೆಪಿಎಸ್​ಸಿಯವರು ಟಾಯ್ಲೆಟ್​ನಲ್ಲೇ ಇಷ್ಟು ದೊಡ್ಡ ಊಟ ಮಾಡಿರಬೇಕಾದರೆ, ಬೇರೆ ಬೇರೆ ಲೆಕ್ಕದಲ್ಲಿ ಎಷ್ಟು ತಿಂದಿರಬೇಕು..?
 

-ಪಾರಿವಾಳಗಳು ಟಾಯ್ಲೆಟ್​ಗೆ ಬರದಂತೆ ತಡೆಯಲು ಮೆಷ್ - 4 ಲಕ್ಷ

-ಅಂಗವಿಕಲರಿಗೆ ಅನುಕೂಲವಾಗಲು ರ್ಯಾಂಪ್ - 5 ಲಕ್ಷ

-ಕಸದ ತೊಟ್ಟಿ ಮತ್ತು ಶೌಚಾಲಯ ನಿರ್ವಹಣೆ - 6 ಲಕ್ಷ

-ಹೊಸ ಸದಸ್ಯರ ಕಚೇರಿ ನವೀಕರಣ - 35 ಲಕ್ಷ

-ಗೋಡೆಗೆ ಗ್ರಿಲ್ ಹಾಕಿಸಿದ್ದು - 19 ಲಕ್ಷ

-ಕಾರಿಡಾರ್ ನವೀಕರಣ  - 8 ಲಕ್ಷ

-ಒಂದೇ ಒಂದು ಏಣಿಗೆ - 5 ಲಕ್ಷ

ಅದ್ಯಾವ ಪಾರಿವಾಳದ ಮೆಷ್ 4 ಲಕ್ಷವೋ ಗೊತ್ತಿಲ್ಲ. ಅದ್ಯಾವ ಏಣಿ 5 ಲಕ್ಷದ್ದೋ ಗೊತ್ತಿಲ್ಲ. ಕೆಪಿಎಸ್​ಸಿ ಕುರ್ಚಿಯಲ್ಲಿ, ಇಂಥಾ ಅಮೋಘ ಟಾಯ್ಲೆಟ್ಟುಗಳಲ್ಲಿ ಕುಳಿತು ಹೋದ ಕೆಪಿಎಸ್​ಸಿ ಅಧ್ಯಕ್ಷರು, ಸದಸ್ಯರೇ ಹೇಳಬೇಕು. ಇನ್ನು ಒಂದೇ ದಿನಾಂಕಕ್ಕೆ ಎರಡೆರಡು ಬಿಲ್ ಬಂದಿವೆ, ಒಂದೇ ಕಾಮಗಾರಿ ಹೆಸರಿನ ಎರಡೆರಡು ಬಿಲ್ ಬಂದಿವೆ, ತುರ್ತು ಕಾಮಗಾರಿ ಹೆಸರಿನಲ್ಲಿ 50ಕ್ಕೂ ಹೆಚ್ಚು ಬಿಲ್ ಬಂದಿವೆ.

ಕಟ್ಟಡ ನಿರ್ವಹಣೆಗಾಗಿ ಖರ್ಚಾಗಿದ್ದು, 3 ಕೋಟಿಗೂ ಹೆಚ್ಚು

ಇಂಥಾ ಟಾಯ್ಲೆಟ್ಟಿಗೆ, ಇಂಥಾ ಆಫೀಸಿಗೆ 3 ಕೋಟಿ ಜನರ ತೆರಿಗೆ ದುಡ್ಡು ವೇಸ್ಟ್ ಆಗಬೇಕಾ? ಕೆಪಿಎಸ್​ಸಿ ಎಂದರೆ, ಇರುವುದೇ ಮೋಸ ಮಾಡಲು ಎನ್ನುವುದು ಜನಜನಿತವಾಗಿರುವಾಗಲೇ ಸುವರ್ಣ ನ್ಯೂಸ್​ಗೆ ಈ ಎಕ್ಸ್​ಕ್ಲೂಸಿವ್ ಡೀಟೈಲ್ಸ್ ಸಿಕ್ಕಿದೆ.
ಭ್ರಷ್ಟರು ಹೇಸಿಗೆಯ ಮೇಲಿದ್ದ ಕಿಲುಬು ಕಾಸನ್ನೂ ನಾಲಗೆಯಲ್ಲಿ ಒರೆಸಿ ಜೇಬಿಗೆ ಇಟ್ಕೋತಾರೆ ಅನ್ನೋದು ನಾಣ್ಣುಡಿ. ಅದು ನಿಜ ಅಂತಾ ಕೆಪಿಎಸ್​ಸಿಯವರು,  ಈ ಟಾಯ್ಲೆಟ್'​ನಲ್ಲಿ ಭೋಜನ ಮಾಡಿ ಸಾಬೀತು ಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದಲ್ಲಿ ನಕ್ಸಲರು,ದಂಗೆಕೋರ ಗುಂಪುಗಳಿಗೆ ತರಬೇತಿ : ಅಮೆರಿಕನ್ ಪ್ರಜೆ ಸೇರಿ 7 ವಿದೇಶಿಗರ ಬಂಧನ: NIA ಕಸ್ಟಡಿ
ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್‌ ಚಾನೆಲ್‌ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ